ತಿರುವನಂತಪುರಂ: ರಾಜ್ಯದಲ್ಲಿ ಜ್ವರ ಸಾವಿನ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕ ಮೂಡಿಸಿದೆ. ನಿನ್ನೆ ಜ್ವರದಿಂದ ಆರು ಮಂದಿ ಸಾವನ್ನಪ್ಪಿದ್ದಾರೆ. 10,830 ಜನರು ಸರ್ಕಾರಿ ಆಸ್ಪತ್ರೆಗಳಲ್ಲಿ ಜ್ವರಕ್ಕೆ ಚಿಕಿತ್ಸೆ ಪಡೆದಿದ್ದಾರೆ. ಮತ್ತು 72 ಮಂದಿಗೆ ಡೆಂಗ್ಯೂ ಜ್ವರ ದೃಢಪಟ್ಟಿದೆ.
395 ಮಂದಿ ಡೆಂಗ್ಯೂ ಲಕ್ಷಣಗಳೊಂದಿಗೆ ಚಿಕಿತ್ಸೆ ಪಡೆದಿದ್ದಾರೆ. 24 ಮಂದಿಗೆ ಇಲಿ ಜ್ವರ ದೃಢಪಟ್ಟಿದೆ. ಇಲಿ ಜ್ವರದಿಂದ ಒಬ್ಬರು ಮೃತಪಟ್ಟಿದ್ದಾರೆ. ಒಟ್ಟು ಜ್ವರದ ಸಾವುಗಳು ಆರಕ್ಕೆ ಏರಿದೆ. ಮುಂದಿನ ಎರಡು ವಾರಗಳು ನಿರ್ಣಾಯಕ ಎಂಬ ಮೌಲ್ಯಮಾಪನದ ಆಧಾರದ ಮೇಲೆ ಆರೋಗ್ಯ ಇಲಾಖೆ ಎಲ್ಲಾ ಜಿಲ್ಲೆಗಳಿಗೆ ಸೂಚನೆಗಳನ್ನು ನೀಡಿದೆ. ಕುಟ್ಟನಾಡನ್ ಪ್ರದೇಶದಲ್ಲಿ ಭೂಮಿ ಮತ್ತು ನೀರಿನಲ್ಲಿ ಸಂಚಾರಿ ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದೆ. ಪರಿಹಾರ ಶಿಬಿರಗಳಲ್ಲಿ ವೈದ್ಯಕೀಯ ತಂಡದ ಸೇವೆಯನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ಇಲಾಖೆ ಸೂಚನೆಗಳನ್ನು ನೀಡಿದೆ.
ರಾಜ್ಯದಲ್ಲಿ ಡೆಂಗ್ಯೂ ಜತೆಗೆ ಇಲಿ ಜ್ವರದ ಹಾವಳಿಯೂ ತೀವ್ರಗೊಳ್ಳುತ್ತಿದೆ. ಬಿಲಗಳಿಗೆ ನೀರು ಸೇರುತ್ತಿದ್ದಂತೆ ಇಲಿ ಮೂತ್ರ ನೀರಿನಲ್ಲಿ ಬೆರೆತು ರೋಗ ವೇಗವಾಗಿ ಹರಡುತ್ತದೆ. ಕೆಸರು ಅಥವಾ ಕಲುಷಿತ ನೀರು ಬಿದ್ದರೆ ಇಲಿಜ್ವರ ರೋಗ ನಿವಾರಕ ಔಷಧಿüಯಾದ ಡಾಕ್ಸಿಸೈಕ್ಲಿನ್ ಸೇವಿಸಬೇಕು ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ. ಮಕ್ಕಳು ಮತ್ತು ಇತರ ಅಸ್ವಸ್ಥರು ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು ಎಂಬ ಎಚ್ಚರಿಕೆಯೂ ಇದೆ.





