HEALTH TIPS

ತಿರುವನಂತಪುರಂ ಇಸಾರ್ 11ನೇ ಪದವಿ ಪ್ರದಾನ ಸಮಾರಂಭ: ಇಸ್ರೋ ಮಾಜಿ ಅಧ್ಯಕ್ಷ ಡಾ. ಕೆ. ರಾಧಾಕೃಷ್ಣನ್ ಪದವಿ ಪ್ರದಾನ

               ತಿರುವನಂತಪುರಂ: ತಿರುವನಂತಪುರಂನಲ್ಲಿರುವ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ (ಐಸಿಇಆರ್) ಹನ್ನೊಂದನೇ ಪದವಿ ಪ್ರದಾನ ಸಮಾರಂಭವನ್ನು ತಿರುವನಂತಪುರದಲ್ಲಿ ನಿನ್ನೆ ಆಯೋಜಿಸಲಾಗಿತ್ತು.

               ಇಸ್ರೋ ಮಾಜಿ ಅಧ್ಯಕ್ಷ ಹಾಗೂ ಐಐಟಿ ಕೌನ್ಸಿಲ್ ಸ್ಥಾಯಿ ಸಮಿತಿ ಅಧ್ಯಕ್ಷ ಡಾ. ಕೆ.ರಾಧಾಕೃಷ್ಣನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

                   ಐಎಸ್ ಎ ಆರ್ ಭಾರತೀಯ ವಿಜ್ಞಾನ ಕ್ಷೇತ್ರವನ್ನು ಪರಿವರ್ತಿಸುತ್ತಿದೆ ಮತ್ತು ಅವರುÉೈಎಸ್ ಎ ಆರ್ ನ ರಾಯಭಾರಿಗಳಾಗಬೇಕು ಎಂದು ಅವರು ಕರೆನೀಡಿದರು. ಇಂದು ನಮ್ಮ ಜಗತ್ತು ಎದುರಿಸುತ್ತಿರುವ ಪ್ರಮುಖ ವೈಜ್ಞಾನಿಕ, ತಾಂತ್ರಿಕ, ಸಾಮಾಜಿಕ ಮತ್ತು ಪರಿಸರ ಸಮಸ್ಯೆಗಳನ್ನು ಪರಿಹರಿಸಲು ಕೊಡುಗೆ ನೀಡುವಂತೆ ಅವರು ಪದವೀಧರರನ್ನು ಕೇಳಿದರು. ಈ ಸಂದರ್ಭದಲ್ಲಿ 189 ಬಿಎಸ್‍ಎಂಎಸ್, 73 ಎಂಎಸ್‍ಸಿ, 21 ಎಂಎಸ್ (ಸಂಶೋಧನೆ), 36 ಪಿಎಚ್‍ಡಿ ಮತ್ತು 12 ಇಂಟಿಗ್ರೇಟೆಡ್ ಪಿಎಚ್‍ಡಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.

          ಐಎಸ್‍ಎಆರ್ ಆಡಳಿತ ಮಂಡಳಿ ಅಧ್ಯಕ್ಷ ಪೆÇ್ರ. ಅರವಿಂದ ಎ ನಾಥು ಅಧ್ಯಕ್ಷತೆ ವಹಿಸಿದ್ದರು.  ನಿರ್ದೇಶಕ ಪೆÇ್ರ.ಜೆ.ಎನ್.ಮೂರ್ತಿ ಸಂಸ್ಥೆಯ ಪ್ರಗತಿ ಮತ್ತು ಪ್ರಗತಿ ವರದಿ ಮಂಡಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries