HEALTH TIPS

ಆ.23ರ ಸಂಜೆ 'ಸಾಫ್ಟ್‌ ಲ್ಯಾಂಡಿಂಗ್'

                ಶ್ರೀಹರಿಕೋಟಾ: 'ಚಂದ್ರಯಾನ-3'ರ 'ಸಾಫ್ಟ್‌ ಲ್ಯಾಂಡಿಂಗ್‌'ಅನ್ನು ಆಗಸ್ಟ್‌ 23ರ ಸಂಜೆ 5.47ಕ್ಕೆ ನೆರವೇರಿಸಲು ಯೋಜಿಸಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಧ್ಯಕ್ಷ ಎಸ್‌.ಸೋಮನಾಥ್‌ ಶುಕ್ರವಾರ ಹೇಳಿದರು.

               'ಚಂದ್ರಯಾನ-3' ಉಡ್ಡಯನದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಸಾಫ್ಟ್‌ ಲ್ಯಾಂಡಿಂಗ್‌ ತಾಂತ್ರಿಕವಾಗಿ ಬಹಳ ಸವಾಲಿನ ಕಾರ್ಯವಾಗಿದೆ' ಎಂದರು.

               'ಗಗನನೌಕೆಯನ್ನು ಚಂದ್ರನ ಕಕ್ಷೆಗೆ ಸೇರಿಸುವ ಕಾರ್ಯವನ್ನು ಆಗಸ್ಟ್‌ 1ರಿಂದ ಆರಂಭಿಸಲು ಯೋಜಿಸಲಾಗಿದೆ' ಎಂದು ಹೇಳಿದರು.


                 ಈ ಕಾರ್ಯಕ್ರಮದ ನಿರ್ದೇಶಕ ಎಸ್‌.ಮೋಹನಕುಮಾರ್,'ಎಲ್‌ವಿಎಂ3 ರಾಕೆಟ್‌ ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ' ಎಂದು ಹೇಳಿದರು.

                 'ಪ್ರೊಪಲ್ಷನ್‌ ಮಾಡ್ಯೂಲ್‌ ಹಾಗೂ ಲ್ಯಾಂಡರ್‌ ಮಾಡ್ಯೂಲ್‌ನಲ್ಲಿ ವಿದ್ಯುತ್‌ ಉತ್ಪಾದನೆ ಸೇರಿದಂತೆ ಗಗನನೌಕೆ ಕಾರ್ಯಾಚರಣೆಗೆ ಸಂಬಂಧಿಸಿದ ಎಲ್ಲ ಅಂಶಗಳು ಸುಸ್ಥಿತಿಯಲ್ಲಿವೆ' ಎಂದು ಯೋಜನಾ ನಿರ್ದೇಶಕ ಪಿ.ವೀರಮುತ್ತುವೇಲು ಹೇಳಿದರು.

                ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್‌, 'ಚಂದ್ರಯಾನ-3ಕ್ಕೆ ಅಂದಾಜು ₹ 600 ಕೋಟಿ ವೆಚ್ಚವಾಗಿದೆ' ಎಂದು ಹೇಳಿದರು.

               'ಭಾರತದ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಎಂದೇ ಕರೆಯಲಾಗುವ ದಿವಂಗತ ವಿಕ್ರಮ್‌ ಸಾರಾಭಾಯಿ ಅವರು ಆರು ದಶಕಗಳ ಹಿಂದೆ ಇಂಥ ಆಕಾಶಯಾನ ಕನಸ ಕಂಡಿದ್ದರು. ಅವರ ಕನಸು ಈ ದಿನ ಸಾಕಾರಗೊಂಡಂತಾಗಿದೆ' ಎಂದರು.

         'ಚಂದ್ರಯಾನ-3'              ನೌಕೆಯನ್ನು ಹೊತ್ತ ರಾಕೆಟ್‌ ಬಾನಂಗಳದಲ್ಲಿ ಸಾಗಿದ್ದನ್ನು ಪ್ರೇಕ್ಷಕರ ಗ್ಯಾಲರಿಯಲ್ಲಿದ್ದವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದರು -ಪಿಟಿಐ ಚಿತ್ರ

               'ಇಂತಹ ಯೋಜನೆ ಅನುಷ್ಠಾನಕ್ಕೆ ಆಗ ಸಾರಾಭಾಯಿ ಅವರಿಗೆ ಹಣಕಾಸಿನ ಕೊರತೆ ಇದ್ದಿರಬಹುದು, ಆದರೆ, ಅವರಲ್ಲಿ ಆತ್ಮವಿಶ್ವಾಸ, ದೂರದೃಷ್ಟಿಗೆ ಕೊರತೆ ಇರಲಿಲ್ಲ' ಎಂದು ಸ್ಮರಿಸಿದರು.

 'ಚಂದ್ರಯಾನ-3' ನೌಕೆಯನ್ನು ಹೊತ್ತ ರಾಕೆಟ್‌ ನಭದತ್ತ ಚಿಮ್ಮಿದ್ದನ್ನು ಕಂಡು ಮಹಿಳೆ ಹಾಗೂ ಮಗು ರಾಷ್ಟ್ರ ಧ್ವಜದೊಂದಿಗೆ ಸಂಭ್ರಮಿಸಿದ್ದು ಕಂಡುಬಂತು -ಎಎಫ್‌ಪಿ ಚಿತ್ರಆಂಧ್ರಪ್ರದೇಶ ಮಾತ್ರವಲ್ಲ ಇತರ ರಾಜ್ಯಗಳಿಂದ ಬಂದಿದ್ದವರಲ್ಲಿ ಕುತೂಹಲ.. ಕ್ಷಣಗಳು ಉರುಳಿದಂತೆ ಆ ಕುತೂಹಲ ಹೆಚ್ಚುತ್ತಿತ್ತು. ಕೊನೆಗೆ ಆ ಘಳಿಗೆ ಬಂದೇ ಬಿಟ್ಟಿತು... 'ಚಂದ್ರಯಾನ-3' ನೌಕೆ ಉಡಾವಣಾ ನೆಲೆಯಿಂದ ಚಿಮ್ಮಿ ಆಕಾಶದತ್ತ ಮುನ್ನುಗ್ಗುತ್ತಿರುವಂತೆಯೇ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದವರ ಕುತೂಹಲ ಸಂಭ್ರಮವಾಗಿ ಮಾರ್ಪಟ್ಟಿತ್ತು.. ನೌಕೆ ಗಗನಮುಖಿಯಾಗಿದ್ದರೆ ಇವರ ಚಪ್ಪಾಳೆ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಜೋರಾಗಿ ಕೂಗುವುದು ಚೀರುವ ಮೂಲಕ ಇಸ್ರೊದ ಕಾರ್ಯಕ್ಕೆ ತಮ್ಮ ಮೆಚ್ಚುಗೆಯ ಮುದ್ರೆವೊತ್ತಿದರು. ಹಲವರು ರಾಕೆಟ್‌ನ ಪಯಣವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿಯುತ್ತಿದ್ದುದು ಕೂಡ ಕಂಡುಬಂತು. ಅದರಲ್ಲೂ ಪ್ರೊಪಲ್ಷನ್‌ ಮಾಡ್ಯೂಲ್‌ ರಾಕೆಟ್‌ನಿಂದ ಯಶಸ್ವಿಯಾಗಿ ಬೇರ್ಪಟ್ಟ ಬಗ್ಗೆ ನಿಯಂತ್ರಣ ಕೇಂದ್ರದಿಂದ ಘೋಷಣೆ ಕೇಳಿಬಂದಾಗ ಸಚಿವ ಸಿಂಗ್‌ ಇಸ್ರೊದ ಮಾಜಿ ಅಧ್ಯಕ್ಷರು ಸೇರಿದಂತೆ ಕೇಂದ್ರದಲ್ಲಿದ್ದವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಉಡಾವಣಾ ಕೇಂದ್ರ ಇರುವ ಕಡಲ ತಡಿಯಲ್ಲಿ ನಿಂತಿದ್ದ ಹಲವರು ರಾಷ್ಟ್ರ ಧ್ವಜ ಹಿಡಿದು ಸಂಭ್ರಮಿಸಿ ಇಸ್ರೊ ಸಾಧನೆಗೆ ಅಭಿಮಾನ ಮೆರೆದರು.ಮುಗಿಲು ಮುಟ್ಟಿದ ಸಂಭ್ರಮ

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries