ರಾಮಪುರ: ಶಿಮ್ಲಾ ಜಿಲ್ಲೆಯ ರಾಮಪುರ ಉಪವಿಭಾಗದಲ್ಲಿ ಮೇಘಸ್ಫೋಟದಿಂದ ಶಾಲೆ, ಐದು ಮನೆಗಳು ಮತ್ತು ಕೃಷಿ ಭೂಮಿ ಕೊಚ್ಚಿಕೊಂಡು ಹೋಗಿವೆ. ಭೂಕುಸಿತದಿಂದ ಜಕ್ರಿ ಮತ್ತು ಜೋರಿ ಪ್ರದೇಶಗಳ ಬಳಿ ರಾಷ್ಟ್ರೀಯ ಹೆದ್ದಾರಿ 5 ಬಂದ್ ಆಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ರಾಮಪುರ: ಶಿಮ್ಲಾ ಜಿಲ್ಲೆಯ ರಾಮಪುರ ಉಪವಿಭಾಗದಲ್ಲಿ ಮೇಘಸ್ಫೋಟದಿಂದ ಶಾಲೆ, ಐದು ಮನೆಗಳು ಮತ್ತು ಕೃಷಿ ಭೂಮಿ ಕೊಚ್ಚಿಕೊಂಡು ಹೋಗಿವೆ. ಭೂಕುಸಿತದಿಂದ ಜಕ್ರಿ ಮತ್ತು ಜೋರಿ ಪ್ರದೇಶಗಳ ಬಳಿ ರಾಷ್ಟ್ರೀಯ ಹೆದ್ದಾರಿ 5 ಬಂದ್ ಆಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಸರಪಾರಾ ಪಂಚಾಯಿತಿ ವ್ಯಾಪ್ತಿಯ ಕಂಧಾರ್ ಗ್ರಾಮದಲ್ಲಿ ಮಂಗಳವಾರ ಮೇಘಸ್ಫೋಟದಿಂದ ಸುಮಾರು 20 ಕುರಿಗಳು ಮತ್ತು ಜಾನುವಾರುಗಳು ನೀರಿನ ರಭಸಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿವೆ. ಭೂಕುಸಿತದಿಂದ ಶಿಮ್ಲಾ- ಕಣ್ಣೂರ್ ರಸ್ತೆ ಬಂದ್ ಆಗಿದೆ ಎಂದು ರಾಮಪುರ ಉಪ ವಿಭಾಗದ ಮ್ಯಾಜಿಸ್ಟ್ರೇಟ್ ನಿಶಾಂತ್ ತೋಮರ್ ತಿಳಿಸಿದ್ದಾರೆ.
ಐದು ಮನೆಗಳು ಸಂಪೂರ್ಣ ಹಾನಿಗೀಡಾಗಿವೆ. ಸುಂದಾ ಗ್ರಾಮದ ಸಮೀಪ ಕಲ್ಲು ಉರುಳಿ ಎರಡು ವಾಹನಗಳು ಸಂಪೂರ್ಣ ಜಖಂಗೊಂಡಿವೆ. ವಾಹನಗಳ ಚಾಲಕರು ಮತ್ತು ಪ್ರಯಾಣಿಕರನ್ನು ಪಾರುಮಾಡಲಾಗಿದೆ.
ಮಹಾರಾಷ್ಟ್ರದಲ್ಲಿ ಐವರ ಸಾವು
ಚಂದ್ರಾಪುರ: ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ನಾಲ್ಕು ಸ್ಥಳಗಳಲ್ಲಿ ಕಳೆದ 24 ಗಂಟೆಗಳಲ್ಲಿ ಸಿಡಿಲು ಬಡಿದು ನಾಲ್ವರು ಮಹಿಳೆಯರು ಸೇರಿ ಐವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.