HEALTH TIPS

ಎಲತ್ತೂರು ರೈಲು ದಾಳಿ ಪ್ರಕರಣ; ಶಾರುಖ್ ಸೈಫಿಗೆ ಯಾವುದೇ ಮಾನಸಿಕ ಸಮಸ್ಯೆಗಳಿಲ್ಲ; ನೆಪ ಹೇಳಿ ತನಿಖೆಯ ದಾರಿ ತಪ್ಪಿಸುವ ಯತ್ನ: ತನಿಖಾ ತಂಡ

              ಕೋಝಿಕ್ಕೋಡ್: ಎಲತ್ತೂರ್ ರೈಲು ದಾಳಿ ಪ್ರಕರಣದ ಪ್ರಮುಖ ಶಂಕಿತ ಶಾರುಖ್ ಸೈಫಿಗೆ ಯಾವುದೇ ಮಾನಸಿಕ ಸಮಸ್ಯೆ ಇಲ್ಲ ಎಂದು ತನಿಖಾ ತಂಡ ಪತ್ತೆ ಮಾಡಿದೆ.

            ಶಾರುಖ್ ಸೈಫಿ  ತನಿಖೆಯಲ್ಲಿ ಮಾನಸಿಕ ಸಮಸ್ಯೆಗಳನ್ನು ಕೃತಕವಾಗಿ ಸೃಷ್ಟಿಸುವ ಪ್ರಯತ್ನ ಮಾಡಿರುವುದು ಬೆಳಕಿಗೆ ಬಂದಿದೆ. ಶಾರುಖ್ ನ ಮಾನಸಿಕ ಸ್ಥಿತಿಯನ್ನು ವಿಶೇಷ ವೈದ್ಯಕೀಯ ತಂಡ ಪರೀಕ್ಷಿಸಿದೆ.

                ಪ್ರಮುಖ ಆರೋಪಿ ಶಾರುಖ್ ಸೈಫಿ ಮಾನಸಿಕ ಅಸ್ವಸ್ಥತೆಯನ್ನು ಬಿಂಬಿಸುವ ಮೂಲಕ ಎನ್‍ಐಎ ವಿಚಾರಣೆಗೆ ಸಹಕರಿಸುತ್ತಿಲ್ಲ. ಸಹ ಆರೋಪಿಗಳು ಮತ್ತು ರಾಜ್ಯದಲ್ಲಿ ಸಹಾಯ ಮಾಡಿದವರ ಬಗ್ಗೆ ಪ್ರಶ್ನೆಗಳಿಗೆ ಹೋದಾಗಲೆಲ್ಲ ಮಾನಸಿಕ ಅಸ್ವಸ್ಥತೆಯನ್ನು ತೋರಿಸುತ್ತಿದ್ದ.

            ನ್ಯಾಯಾಲಯದ ಆದೇಶದಂತೆ ಶಾರುಖ್ ನನ್ನು ನಾಲ್ವರು ಸದಸ್ಯರ ವೈದ್ಯಕೀಯ ಮಂಡಳಿ ಪರೀಕ್ಷಿಸಿತ್ತು. ಮನೋವೈದ್ಯರನ್ನೊಳಗೊಂಡ ವೈದ್ಯಕೀಯ ಮಂಡಳಿಯ ಪರೀಕ್ಷೆಯಲ್ಲಿ ಯಾವುದೇ ಮಾನಸಿಕ ಸಮಸ್ಯೆಗಳು ಕಂಡುಬಂದಿಲ್ಲ. ಶಾರುಖ್ ಸೈಫಿಯ ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ವಿವರವಾಗಿ ಪರಿಶೀಲಿಸಲಾಯಿತು. ತನಗೆ ಹೊಟ್ಟೆ ನೋವಿನ  ಸಮಸ್ಯೆ ಇದೆ ಎಂದು ಜೈಲು ವೈದ್ಯರ ಬಳಿಯೂ ಹೇಳಿಕೊಂಡಿದ್ದ. ಮಾನಸಿಕ ಸಮಸ್ಯೆಗಳಿದ್ದಲ್ಲಿ ಮಾನಸಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಚಿಕಿತ್ಸೆ ನೀಡಲು ವೈದ್ಯಕೀಯ ಮಂಡಳಿಯನ್ನು ನೇಮಿಸಲಾಗಿತ್ತು. ಶಾರುಖ್ ಸೈಫಿಗೆ ಯಾವುದೇ ಮಾನಸಿಕ ಸಮಸ್ಯೆಗಳಿಲ್ಲದ ಕಾರಣ ಇನ್ನೂ ವಿಯ್ಯೂರಿನ ಗರಿಷ್ಠ ಭದ್ರತೆಯ ಜೈಲಿನಲ್ಲಿದ್ದಾನೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries