ಕೊಚ್ಚಿ: ಬಸ್ ಪ್ರಯಾಣದ ವೇಳೆ ಯುವ ಪ್ರಯಾಣಿಕನೊಬ್ಬನ ಮೇಲೆ ಹಲ್ಲೆ ಮಾಡಿ, ಅಶ್ಲೀಲ ಪದಗಳಿಂದ ನಿಂದಿಸಿದ ವೆಲ್ಲರಾಡ ಡಿಪೋವಿನ ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಕಂಡಕ್ಟರ್ನನ್ನು ಸುರೇಶ್ ಕುಮಾರ್ (42) ಎಂದು ಗುರುತಿಸಲಾಗಿದೆ.
ಬಸ್ ಕಟ್ಟಕ್ಕಾಡ ಡಿಪೋಗೆ ತಲುಪುತ್ತಿದ್ದಂತೆ ಮತ್ತೆ ಯುವಕನ ಬಳಿ ಬಂದ ಕಂಡಕ್ಟರ್ ಅಶ್ಲೀಲ ಪದಗಳಿಂದ ನಿಂದಿಸಲು ಶುರು ಮಾಡುತ್ತಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗುತ್ತದೆ. ಇಬ್ಬರ ನಡುವಿನ ವಾಗ್ವಾದ ವಿಕೋಪಕ್ಕೆ ತಿರುಗಿದಾಗ ಉದ್ರಿಕ್ತ ಕಂಡಕ್ಟರ್ ಟಿಕೆಟ್ ಮೆಶಿನ್ನಿಂದಲೇ ಯುವಕನ ಮೇಲೆ ಹಲ್ಲೆ ಮಾಡುತ್ತಾನೆ. ಅಲ್ಲದೆ, ಆತನನ್ನು ದೂರ ನೂಕುತ್ತಾನೆ.
ಇದಾದ ಬಳಿಕ ಕಂಡಕ್ಟರ್ ಪೊಲೀಸರನ್ನು ಕರೆಸಿ ತನ್ನ ಮೇಲೆ ಯುವಕ ಹಲ್ಲೇ ಮಾಡಲು ಯತ್ನಿಸಿದ ಎಂದು ಸುಳ್ಳು ದೂರು ನೀಡಲು ಯತ್ನಿಸುತ್ತಾನೆ. ಆದರೆ, ಬಸ್ನಲ್ಲಿದ್ದ ಇತರೆ ಪ್ರಯಾಣಿಕರು ಕಂಡಕ್ಟರ್ ವರ್ತನೆಯನ್ನು ವಿವರಿಸುತ್ತಾರೆ. ಬಳಿಕ ಕಂಡಕ್ಟರ್ನನ್ನೇ ಪೊಲೀಸರು ಬಂಧಿಸುತ್ತಾರೆ. ಈ ಘಟನೆಯನ್ನು ಸಹ ಪ್ರಯಾಣಿಕರೊಬ್ಬರು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಜಾಲತಾಲದಲ್ಲೂ ಕಂಡಕ್ಟರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಗಾಯಗೊಂಡಿದ್ದ ಯುವಕನ್ನು ಸ್ಥಳೀಯರು ಕಟ್ಟಕ್ಕಾಡ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲದೆ, ಕಂಡಕ್ಟರ್ ವಿರುದ್ಧವೂ ದೂರು ನೀಡಿದ್ದಾರೆ. ಪೊಲೀಸರು ಹೃತಿಕ್ ಹೇಳಿಕೆಯನ್ನು ಪಡೆದು ಕಂಡಕ್ಟರ್ ವಿರುದ್ಧ ಪ್ರಕರಣ ದಾಖಲಿಸಿದರು. ಆದರೆ, ಅದೇ ದಿನ ಜಾಮೀನಿನ ಮೇಲೆ ಕಂಡಕ್ಟರ್ನನ್ನು ಬಿಟ್ಟು ಕಳುಹಿಸಲಾಗಿದೆ.
ಸುರೇಶ್ ಕುಮಾರ್ ಅವರು ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಇತಿಹಾಸವನ್ನು ಕೆಎಸ್ಆರ್ಟಿಸಿ ಅಧಿಕಾರಿಗಳು ಬಹಿರಂಗಪಡಿಸಿದ್ದು, ಅವರ ವಿರುದ್ಧ ಈ ಹಿಂದೆಯೂ ಕ್ರಮ ಕೈಗೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ.