HEALTH TIPS

'ಇಂಡಿಯಾ' ಸದಸ್ಯರು ಮಣಿಪುರಕ್ಕೆ ಭೇಟಿ ನೀಡಿರುವುದು ತೋರಿಕೆಗಾಗಿ: ಅನುರಾಗ್ ಠಾಕೂರ್

              ಕೋಲ್ಕತ್ತ: 'ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿರುವ ಮಣಿಪುರಕ್ಕೆ 'ಇಂಡಿಯಾ' ಸದಸ್ಯರ ನಿಯೋಗವು ಕೇವಲ ತೋರಿಕೆಗಾಗಿ ಭೇಟಿ ನೀಡಿದೆ' ಎಂದು ಕೇಂದ್ರ ಮಾಹಿತಿ ಮತ್ತು ಪ್ರಚಾರ ಸಚಿವ ಅನುರಾಗ್‌ ಠಾಕೂರ್‌ ವ್ಯಂಗ್ಯವಾಡಿದ್ದಾರೆ.

                 ಸುದ್ದಿಗಾರರೊಂದಿಗೆ ಶನಿವಾರ ಇಲ್ಲಿ ಮಾತನಾಡಿದ ಅವರು, 'ಹಿಂದಿನ ಸರ್ಕಾರಗಳ ಅವಧಿಯಲ್ಲಿಯೂ ಮಣಿಪುರ ಹೊತ್ತಿ ಉರಿದಿದೆ.

               ಆ ವೇಳೆ ಈಗ ನಿಯೋಗದಲ್ಲಿರುವ ಸದಸ್ಯರು ಸಂಸತ್‌ನಲ್ಲಿ ಒಂದು ಪದವನ್ನೂ ಮಾತನಾಡಿಲ್ಲ. ಮತ್ತಷ್ಟು ತಿಂಗಳ ಕಾಲ ಸಂಘರ್ಷ ಮುಂದುವರಿದರೂ ಅವರ ಮನಸ್ಥಿತಿ ಬದಲಾಗಲ್ಲ' ಎಂದು ಟೀಕಿಸಿದರು.

               'ಕಣಿವೆ ರಾಜ್ಯಕ್ಕೆ ತೆರಳಿರುವ ನಿಯೋಗದ ಸದಸ್ಯರು ಮರಳಿ ಬಂದಾಗಲೂ ಸುಗಮವಾಗಿ ಸಂಸತ್‌ನ ಕಲಾಪ ನಡೆಯಲು ಅವಕಾಶ ನೀಡುವುದಿಲ್ಲ' ಎಂದು ಆಪಾದಿಸಿದರು.

               'ನೀವು ಮಣಿಪುರಕ್ಕೆ ಭೇಟಿ ನೀಡಿದರೆ ಸಾಲದು. ಪಶ್ಚಿಮ ಬಂಗಾಳದಲ್ಲಿಯೂ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಿವೆ. ರಾಜಸ್ಥಾನದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಅಲ್ಲಿಗೂ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್ ಚೌಧರಿ ಅವರು ಇದೇ ನಿಯೋಗವನ್ನು ಕರೆದೊಯ್ಯಬೇಕಿದೆ. ಬಳಿಕ ಎರಡೂ ರಾಜ್ಯಗಳಲ್ಲಿನ ಸ್ಥಿತಿಗತಿ ಬಗ್ಗೆ ವರದಿ ಸಲ್ಲಿಸಲಿ' ಎಂದರು.

               ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ನಾಗರಿಕರ ಹತ್ಯೆಗಳ ಮೂಲಕ ಅಧಿಕಾರದ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದೆ. ಇದನ್ನು ವಿರೋಧಿಸುವ ತಾಕತ್ತು ಕಾಂಗ್ರೆಸ್‌ಗೆ ಇದೆಯೇ ಎಂದು ಪ್ರಶ್ನಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries