ನವದೆಹಲಿ: ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಪ್ರಸ್ತುತತೆ ಮತ್ತು ಪ್ರಾಮುಖ್ಯತೆ, ವಿಷಯ ಕುರಿತು ವಿವಿಧ ಕೋರ್ಟ್ಗಳ ಆದೇಶಗಳ ಹಿನ್ನೆಲೆಯಲ್ಲಿ ಭಾರತೀಯ ಕಾನೂನು ಆಯೋಗವು ಭಾಗಿದಾರರ ಅಭಿಪ್ರಾಯಗಳನ್ನು ಆಹ್ವಾನಿಸಲು ನಿರ್ಧರಿಸಿದೆ ಎಂದು ಕೇಂದ್ರ ತಿಳಿಸಿದೆ.
0
samarasasudhi
ಜುಲೈ 21, 2023
ನವದೆಹಲಿ: ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಪ್ರಸ್ತುತತೆ ಮತ್ತು ಪ್ರಾಮುಖ್ಯತೆ, ವಿಷಯ ಕುರಿತು ವಿವಿಧ ಕೋರ್ಟ್ಗಳ ಆದೇಶಗಳ ಹಿನ್ನೆಲೆಯಲ್ಲಿ ಭಾರತೀಯ ಕಾನೂನು ಆಯೋಗವು ಭಾಗಿದಾರರ ಅಭಿಪ್ರಾಯಗಳನ್ನು ಆಹ್ವಾನಿಸಲು ನಿರ್ಧರಿಸಿದೆ ಎಂದು ಕೇಂದ್ರ ತಿಳಿಸಿದೆ.
ಕೇಂದ್ರದ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು ಈ ಸಂಬಂಧ ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ.
'ಯುಸಿಸಿ ಅಗತ್ಯ ಅಲ್ಲ, ಅಪೇಕ್ಷಣೀಯವು ಅಲ್ಲ' ಎಂದು ಆಯೋಗದ ಸಮಿತಿಯು ವರದಿ ನೀಡಿದ 4 ವರ್ಷದ ನಂತರ, ಈಗ 22ನೇ ಕಾನೂನು ಆಯೋಗವು ಸಾರ್ವಜನಿಕರು, ಭಾಗಿದಾರರ ಅಭಿಪ್ರಾಯ ಆಹ್ವಾನಿಸಲು ಕಾರಣವೇನು ಎಂಬ ಪ್ರಶ್ನೆಗೆ ಸಚಿವರು ಈ ಮಾಹಿತಿ ನೀಡಿದ್ದಾರೆ.
ಯುಸಿಸಿ ಕುರಿತು ಭಾಗಿದಾರರ ಕಾನೂನು ಆಯೋಗವು ಕಳೆದ ಜೂನ್ ತಿಂಗಳಲ್ಲಿ ಅಭಿಪ್ರಾಯವನ್ನು ಆಹ್ವಾನಿಸಿತ್ತು. ಆಯೋಗವು ಇದುವರೆಗೂ 50 ಲಕ್ಷಕ್ಕೂ ಹೆಚ್ಚು ಜನರಿಂದ ಅಭಿಪ್ರಾಯಗಳನ್ನು ಸ್ವೀಕರಿಸಿದೆ.