ಕೊಚ್ಚಿ: ಕೆಎಸ್ಆರ್ಟಿಸಿಯಲ್ಲಿ ವೇತನ ಮತ್ತು ಪಿಂಚಣಿ ನೀಡಲು ಸರ್ಕಾರದ ಮಧ್ಯಸ್ಥಿಕೆ ಅಗತ್ಯ ಎಂದು ಹೇಳಿರುವ ಹೈಕೋರ್ಟ್, 26ರೊಳಗೆ ನೌಕರರಿಗೆ ವೇತನ ನೀಡಲು ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿದೆ.
ಪಿಂಚಣಿ ಪಾವತಿಯಾಗದೇ ಇದ್ದಲ್ಲಿ ಮೊತ್ತದ ಮಾಹಿತಿ ನೀಡುವಂತೆಯೂ ಸೂಚಿಸಲಾಗಿದೆ. ವೇತನ ಮತ್ತು ಪಿಂಚಣಿ ವಿಳಂಬವನ್ನು ಉಲ್ಲೇಖಿಸಿ ಕೆಎಸ್ಆರ್ಟಿಸಿ ನೌಕರರು ಮತ್ತು ನಿವೃತ್ತರು ಸಲ್ಲಿಸಿದ ಅರ್ಜಿಗಳ ಗುಂಪಿನ ಮೇಲೆ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಈ ಆದೇಶವನ್ನು ಹೊರಡಿಸಿದ್ದಾರೆ. 26ರಂದು ಮತ್ತೆ ಅರ್ಜಿಗಳ ವಿಚಾರಣೆ ನಡೆಯಲಿದೆ.
ಕೆಎಸ್ಆರ್ಟಿಸಿಯನ್ನು ಲಾಭದಾಯಕವಾಗಿಸಲು ಸರ್ಕಾರದ ಬೆಂಬಲ ಅಗತ್ಯ ಎಂದು ನ್ಯಾಯಾಲಯ ಹೇಳಿದೆ. ಸರ್ಕಾರವು ಒಂದು ಮಿತಿಯನ್ನು ಮೀರಿ ಸಹಾಯ ಮಾಡಲು ಸಾಧ್ಯವಿಲ್ಲ. ಮುಚ್ಚಲು ಸಾಧ್ಯವಿಲ್ಲ. ಮತ್ತು ಈ ಸಂಸ್ಥೆ ಹೇಗೆ ಕೆಲಸ ಮಾಡುತ್ತದೆ? ತಿಂಗಳಿಗೆ 300 ಕೋಟಿಗಿಂತ ಹೆಚ್ಚು ಆದಾಯವಿದ್ದರೆ ಸಂಬಳ ಮತ್ತು ಪಿಂಚಣಿ ಪಾವತಿಸಬಹುದು. ಈ ಪರಿಸ್ಥಿತಿಗೆ ಸರ್ಕಾರ ಕೆಎಸ್ಆರ್ಟಿಸಿಗೆ ಮಾರ್ಗದರ್ಶನ ನೀಡಬೇಕು ಮತ್ತು ಕೆಎಸ್ಆರ್ಟಿಸಿಯನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂಬ ನಿಲುವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಪ್ರಸ್ತುತ ಮಾಸಿಕ ಆದಾಯದೊಂದಿಗೆ ಸಂಬಳ ಮತ್ತು ಪಿಂಚಣಿ ಪಾವತಿಸಲಾಗುವುದಿಲ್ಲ. ದಿನಕ್ಕೆ ಹತ್ತು ಕೋಟಿಗೂ ಹೆಚ್ಚು ಆದಾಯ ಬಂದರೆ ಮಾತ್ರ ಸಾಧ್ಯ. ತನ್ನ ಬಳಿ ಹಣವಿಲ್ಲ ಎನ್ನುತ್ತಾರೆ ಎಂಡಿ. ಸಂಸ್ಥೆಯು ಲಾಭದಾಯಕವಾಗುವವರೆಗೆ ಸಹಾಯದ ಅಗತ್ಯವಿದೆ. ಜನರಿಗಾಗಿ ಬಸ್ ಸೇವೆ ನಡೆಸಲಾಗುತ್ತಿದೆ. ಹಾಗಾಗಿ ಸÀರ್ಕಾರ ನೆರವಿಗೆ ಬರಬೇಕು. ಇದಕ್ಕಾಗಿ ನೀತಿ ನಿರ್ಧಾರ ಕೈಗೊಳ್ಳಬೇಕು. ಕೆಲಸ ಸಾಕಾಗುವುದಿಲ್ಲ, ಹಣವೂ ಇಲ್ಲ. ನೌಕರರು ಹಸಿವಿನಿಂದ ಬಳಲುವ ಪರಿಸ್ಥಿತಿಗೆ ಅವಕಾಶ ನೀಡಲಾಗುವುದಿಲ್ಲ. ಬಿಕ್ಕಟ್ಟಿನಿಂದಾಗಿ ವೇತನ ಮತ್ತು ಪಿಂಚಣಿಯನ್ನು ಒಂದು ವರ್ಷದವರೆಗೆ ಸ್ಥಗಿತಗೊಳಿಸಲಾಗದು ಎಂದು ನ್ಯಾಯಾಲಯವು ಮೌಖಿಕವಾಗಿ ಹೇಳಿದೆ.
ಕೆಎಸ್ಆರ್ಟಿಸಿ ಎಂಡಿ ಬಿಜು ಪ್ರಭಾಕರ್ ಆನ್ಲೈನ್ನಲ್ಲಿ ಹಾಜರಾಗಿ ನಿಗಮದ ಆರ್ಥಿಕ ಸ್ಥಿತಿಯನ್ನು ವಿವರಿಸಿದರು. ಸರ್ಕಾರದ ಸಹಾಯವಿಲ್ಲದೆ ಜೂನ್ ತಿಂಗಳ ಸಂಬಳ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಇನ್ನೂ ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದು, ಹೆಚ್ಚಿನ ಸಮಯ ಬೇಕು ಎಂದು ಹೇಳಿದರು. ಕೆಎಸ್ಆರ್ಟಿಸಿಯನ್ನು ಮುಚ್ಚುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿಲ್ಲ ಎಮದವರು ತಿಳಿಸಿದರು.


