HEALTH TIPS

ಶಬರಿಮಲೆಯಲ್ಲಿ ನಿರಪುತ್ತರಿ ಉತ್ಸವ ನಾಳೆಯಿಂದ

                    ಪತ್ತನಂತಿಟ್ಟ; ನಿರಪುತ್ತರಿ ಮಹೋತ್ಸವದ ಅಂಗವಾಗಿ ಶಬರಿಮಲೆ ಶ್ರೀ ಧರ್ಮಶಾಸ್ತಾ ದೇವಸ್ಥಾನದಲ್ಲಿ ಇಂದು ಸಂಜೆ 5 ಗಂಟೆಗೆ ಗರ್ಭಗೃಹದ ಬಾಗಿಲು ತೆರೆಯಲಾಗುತ್ತಿದ್ದು,  10ರಂದು ಬೆಳಗ್ಗೆ 5:45 ರಿಂದ 6:15 ರವರೆಗೆ ನಿರಪುತ್ತರಿ  ಕಾರ್ಯಕ್ರಮಗಳು ನಡೆಯಲಿವೆ. 10ರಂದು ಬೆಳಗ್ಗೆ 18ನೇ ಮೆಟ್ಟಿಲು ಹತ್ತಿ ನಂತರ ಗಣಪತಿ ಹೋಮ ನಡೆಯಲಿರುವ ಮಂಟಪಕ್ಕೆ ತಲುಪಿಸಿ, ತಂತ್ರಿ ಕಂಠಾರರ್ ರಾಜೀವರ್ ಭತ್ತದ ತೆನೆಗಳ ಪೂಜೆ ಸಲ್ಲಿಸಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕುವ ಮೂಲಕ ದೇಗುಲದೊಳಗೆ ಕೊಂಡೊಯ್ಯುವರು.

                     ಶ್ರೀದೇವರ  ಮುಂದೆ ವಿಶೇಷ ಪೂಜೆ ನಡೆಯಲಿದೆ. ನಂತರ ದೇಗುಲದ ಮುಂದೆ ಭತ್ತದ ತೆನೆಗಳನ್ನು ಕಟ್ಟಿ ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಗುತ್ತದೆ. ನಿರಪುತ್ತರಿ ಕಾರ್ಯಕ್ರಮಗಳು ಮುಗಿದು ರಾತ್ರಿ 10 ಗಂಟೆಗೆ ದೇವಸ್ಥಾನವನ್ನು ಮುಚ್ಚಲಾಗುವುದು.16 ರಂದು ಕರ್ಕಾಟಕ ಮಾಸ ಪೂಜೆಗಾಗಿ ತೆರೆಯಲಾಗುವುದು, 21 ರಂದು ರಾತ್ರಿ ಪೂಜೆಗಳನ್ನು ಮುಗಿಸಿ ಗರ್ಭಗೃಹ ಮುಚ್ಚಲಾಗುವುದು, 17 ರಂದು ಉತ್ಸವ, ಆಗಸ್ಟ್ 27 ರಂದು ಓಣಂ ಪೂಜೆಗಳು ನಡೆಯಲಿವೆ.

          ಶಬರಿಮಲೆ ಗರ್ಭಗೃಹ ಬಳಿಕ 31ರಂದು ಮುಚಲಾಗುವುದು. ಓಣಂ ದಿನಗಳಲ್ಲಿ ಶಬರಿಮಲೆಗೆ ಬರುವ ಭಕ್ತಾದಿಗಳಿಗೆ ಓಣಂ ಭೋಜನ ಸಹ ತಯಾರಿಸಲಾಗುತ್ತದೆ. ನಿಲಯ್ಕಲ್ ಮತ್ತು ಪಂಬಾದಲ್ಲಿ ಸ್ಪಾಟ್ ಬುಕಿಂಗ್ ಸೌಲಭ್ಯವೂ ಇರುತ್ತದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries