ಪಾಲಕ್ಕಾಡ್: ಮಳೆ ಬಾರದಿದ್ದರೆ ವಿದ್ಯುತ್ ದರ ಹೆಚ್ಚಿಸಬೇಕಾಗುತ್ತದೆ ಎಂದು ಸಚಿವ ಕೆ.ಕೃಷ್ಣನ್ಕುಟ್ಟಿ ಹೇಳಿದ್ದಾರೆ. ಅಣೆಕಟ್ಟುಗಳಲ್ಲಿ ಈಗ ನೀರಿಲ್ಲ. ಇದು ಸಮಸ್ಯೆ ಸ್|ಋಷ್ಟಿಸಲಿದೆ ಎಂದಿರುವರು.
ಆದರೆ, ವಿದ್ಯುತ್ ದರ ಏರಿಕೆ ಕುರಿತು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ, ನಾಳೆ ನಡೆಯುವ ವಿದ್ಯುತ್ ಮಂಡಳಿ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಮಳೆ ಬಂದರೆ ವಿದ್ಯುತ್ ದರ ಏರಿಕೆ ಮಾಡುವ ಅಗತ್ಯ ಇರುವುದಿಲ್ಲ. ಮಳೆ ಬಾರದೇ ಇದ್ದರೆ ವಿದ್ಯುತ್ ದರ ಹೆಚ್ಚಿಸಬೇಕಾಗುತ್ತದೆ. ಖರೀದಿ ಬೆಲೆಗೆ ಮಾತ್ರ ಪಾವತಿಸಲಾಗುತ್ತದೆ. ಆದಷ್ಟು ಗ್ರಾಹಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಅಣೆಕಟ್ಟುಗಳಲ್ಲಿ ನೀರಿಲ್ಲದ ಕಾರಣ ಹೆಚ್ಚುವರಿ ವಿದ್ಯುತ್ ತೆರಬೇಕಾಗಿದೆ. ಎಷ್ಟು ರೂಪಾಯಿ ಖರೀದಿಸಬೇಕು ಎಂಬ ಬಗ್ಗೆ ಬುಧವಾರದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ನಂತರ ಪರಿಸ್ಥಿತಿಯನ್ನು ಅವಲೋಕಿಸಿ ವಿದ್ಯುತ್ ನಿಯಂತ್ರಣ ಆಯೋಗದ ನಿರ್ಧಾರದ ಆಧಾರದ ಮೇಲೆ ಬೆಲೆ ಹೆಚ್ಚಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.


