HEALTH TIPS

ಆಯುಷ್‌ಮಾನ್‌ ಭವ ಅಭಿಯಾನಕ್ಕೆ ಸೆ.13ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ

               ವದೆಹಲಿ: ಆರೋಗ್ಯ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಆರಂಭಿಸಲಾಗುತ್ತಿರುವ 'ಆಯುಷ್‌ಮಾನ್‌ ಭವ' ಅಭಿಯಾನಕ್ಕೆ ಸೆ.13ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್‌ ಮಾಂಡವಿಯಾ ಸೋಮವಾರ ತಿಳಿಸಿದ್ದಾರೆ.

              ಈ ಅಭಿಯಾನವು ಸೇವಾ ಪಕ್ವಾಡಾ( ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನವಾದ ಸೆ.17ರಿಂದ ಅ.2ರವರೆಗೆ ನಡೆಸುತ್ತಿರುವ 15 ದಿನಗಳ ಸೇವಾ ಕಾರ್ಯಕ್ರಮ)ದಲ್ಲಿ ಆರಂಭವಾಗಲಿದೆ. ಇದರ ಅಡಿಯಲ್ಲಿ ಆರೋಗ್ಯ ಸೌಕರ್ಯಗಳ ಲಭ್ಯತೆ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಂಡವಿಯಾ ಹೇಳಿದ್ದಾರೆ.

                ಆಯುಷ್ಮಾನ್ ಭಾವ ಎಂಬುದು ಆಯುಷ್ಮಾನ್ Apke Dwar 3.0 ಅನ್ನು ಒಳಗೊಂಡಿರುವ ಒಂದು ಅಭಿಯಾನವಾಗಿದ್ದು, ಇದು ಬಾಕಿಯಿರುವ ಆಯುಷ್ಮಾನ್ ಕಾರ್ಡ್‌ಗಳನ್ನು ಎಲ್ಲಾ ಅರ್ಹ ಫಲಾನುಭವಿಗಳಿಗೆ ವಿತರಿಸುವ ಗುರಿಯನ್ನು ಹೊಂದಿದೆ.

                 ಆಯುಷ್ಮಾನ್ ಮೇಳವನ್ನು ಆಯುಷ್‌ಮಾನ್‌ ಭಾರತ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ (AB-HWC) ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ನಡೆಸಲಾಗುವುದು. ಅಲ್ಲದೆ ವಿವಿಧ ಆರೋಗ್ಯ ಯೋಜನೆಗಳು ಮತ್ತು ಸೇವೆಗಳ ಬಗ್ಗೆ ಜಾಗೃತಿ ಮೂಡಿಸಲು ಗ್ರಾಮ ಅಥವಾ ವಾರ್ಡ್ ಮಟ್ಟದ ಸಭೆಯಲ್ಲಿ ಮಾಹಿತಿ ನೀಡಲಾಗುವುದು.

                 ಈ ಅಭಿಯಾನವನ್ನು ಹಂತಹಂತವಾಗಿ ಗ್ರಾಮ ಮತ್ತು ನಗರ ಪಂಚಾಯತಿಗಳಲ್ಲಿ ಜಾರಿಗೆ ತಂದು ಬಳಿಕ ಎಲ್ಲಾ ಗ್ರಾಮ ಮತ್ತು ನಗರಗಳನ್ನು 'ಆಯುಷ್‌ಮಾನ್‌ ಗ್ರಾಮ ಪಂಚಾಯತ್‌' ಅಥವಾ 'ಆಯುಷ್‌ಮಾನ್‌ ವಾರ್ಡ್‌' ಎಂದು ಗುರುತಿಸಿ ಖಚಿತಪಡಿಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries