HEALTH TIPS

ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಅನಿವಾರ್ಯ: ಸಚಿವ ಕೆ.ಕೃಷ್ಣನ್‍ಕುಟ್ಟಿ

                  ತಿರುವನಂತಪುರ: ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಅನಿವಾರ್ಯವಾಗಿದೆ ಎಂದು ಸಚಿವ ಕೆ. ಕೃಷ್ಣನ್ ಕುಟ್ಟಿ ಅವಲತ್ತುಕೊಂಡಿದ್ದಾರೆ.

          ಮಂಡಳಿಯ ಬೇಡಿಕೆ ಹೆಚ್ಚಳ ಹೇಗಿದ್ದರೂ ಆಗುವುದಿಲ್ಲ. ಗರಿಷ್ಠ ಗ್ರಾಹಕರ ಸಂಕಷ್ಟ ನಿವಾರಿಸಲು ಪ್ರಯತ್ನಿಸಲಾಗುವುದು ಎಂದು ಸಚಿವರು ತಿಳಿಸಿದರು

           ಈ ಹಣಕಾಸು ವರ್ಷ ಮತ್ತು ಮುಂದಿನ ಹಣಕಾಸು ವರ್ಷದಲ್ಲಿ ತಲಾ ಸರಾಸರಿ 40 ಪೈಸೆ ಮತ್ತು ನಂತರದ ವರ್ಷಗಳಲ್ಲಿ 20 ಪೈಸೆ ಮತ್ತು 5 ಪೈಸೆಗಳಷ್ಟು ದರವನ್ನು ಹೆಚ್ಚಿಸಲು ಮಂಡಳಿಯು ಬಯಸಿದೆ. ಆದರೆ ಮಂಡಳಿಯ ಕೋರಿಕೆಯಂತೆ ಯಾವುದೇ ಹೆಚ್ಚಳವಿಲ್ಲ ಮತ್ತು ಈ ಬಗ್ಗೆ ನಿಯಂತ್ರಣ ಆಯೋಗವು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸಚಿವ ಕೃಷ್ಣನ್ ಕುಟ್ಟಿ ಹೇಳಿದರು.

         ಈಗಿರುವ ದರ ಇದೇ ತಿಂಗಳ 30ರವರೆಗೆ ಜಾರಿಯಲ್ಲಿರುತ್ತದೆ. ಸರ್ಕಾರದ ಅಭಿಪ್ರಾಯ ಪಡೆದು ಹೊಸ ದರದ ಕುರಿತು ಆದೇಶ ಹೊರಡಿಸಲಾಗುವುದು. ಇದೇ ವೇಳೆ ಪುದುಪಳ್ಳಿ ಚುನಾವಣಾ ಫಲಿತಾಂಶಕ್ಕೂ ವಿದ್ಯುತ್ ದರ ಏರಿಕೆಗೂ ಯಾವುದೇ ಸಂಬಂಧವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries