HEALTH TIPS

ಐಎಸ್ ಭಯೋತ್ಪಾದನೆ: ಬಂಧಿತ ಜಹೀರ್ ತುರ್ಕಿಯನ್ನು ಮತ್ತೆ ವಿಚಾರಣೆಗೆ ಒಳಪಡಿಸಲಿರುವ ಎನ್.ಐ.ಎ.

            ಎರ್ನಾಕುಳಂ: ಕೇರಳದಲ್ಲಿ ಐಎಸ್ ಭಯೋತ್ಪಾದಕ ಚಟುವಟಿಕೆಗಳನ್ನು ಸಂಘಟಿಸಿದ ನಬೀಲ್ ಅಹ್ಮದ್ ಸಹಚರ ಜಹೀರ್ ತುರ್ಕಿಯನ್ನು ಎನ್‍ಐಎ ಮತ್ತೆ ವಿಚಾರಣೆ ನಡೆಸಲಿದೆ.

        ನಿನ್ನೆ ಹಲವು ಗಂಟೆಗಳ ಕಾಲ ಎನ್‍ಐಎ ವಿಚಾರಣೆ ನಡೆಸಿದ ಬಳಿಕ ಮತ್ತೆ ಹಾಜರಾಗುವಂತೆ ನೋಟಿಸ್ ನೀಡಿ ಬಿಡುಗಡೆಗೊಳಿಸಲಾಗಿತ್ತು. ನಬೀಲ್ ಅಹ್ಮದ್ ಪರಾರಿಯಾಗಲು ಮತ್ತು ನಕಲಿ ಸಿಮ್ ಕಾರ್ಡ್ ನೀಡುವಲ್ಲಿ ಜಹೀರ್ ಭಾಗಿಯಾಗಿದ್ದ ಎಂಬುದಕ್ಕೆ ಪುರಾವೆಗಳು ಸಿಕ್ಕಿವೆ ಎಂದು ಎನ್ ಐಎ ಹೇಳಿಕೆ ನೀಡಿದೆ. ವಿವರವಾದ ವಿಚಾರಣೆಯ ನಂತರ ಆರೋಪಿಗಳನ್ನು ಸೇರಿಸುವುದು ಸೇರಿದಂತೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಎನ್.ಐ.ಎ ಹೇಳಿದೆ.

            ಜಹೀರ್‍ನ ಮನೆಯಲ್ಲಿ ನಡೆಸಿದ ಶೋಧದ ವೇಳೆ ಎನ್‍ಐಎ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದನ್ನು ಸಾಬೀತುಪಡಿಸುವ ಡಿಜಿಟಲ್ ಪುರಾವೆಗಳನ್ನು ಪತ್ತೆಹಚ್ಚಲಾಗಿದೆ.  ನಬೀಲ್‍ಗೆ ಅಡಗುದಾಣ ಏರ್ಪಡಿಸಿ, ಸಿಮ್ ಕಾರ್ಡ್ ನೀಡಿ ಕೇರಳದಿಂದ ತೆರಳಲು ಹಣ ನೀಡಿದ್ದು ಈತ ಎಂದು ಎನ್‍ಐಎ ಪತ್ತೆ ಮಾಡಿದೆ.

            ಈ ಹಿಂದೆ ಕೇರಳದಲ್ಲಿ ಐಎಸ್ ಗ್ರೂಪ್ ಆರಂಭಿಸಲು ಕೇರಳೀಯರನ್ನು ಒಳಗೊಂಡ ತಂಡವೊಂದು ಯತ್ನಿಸಿದ್ದನ್ನು ಎನ್ ಐಎ ಪತ್ತೆ ಹಚ್ಚಿತ್ತು. ಎನ್‍ಐಎ ಪ್ರಕಾರ, ಪೆಟ್ ಲವರ್ಸ್ ಎಂಬ ಟೆಲಿಗ್ರಾಂ ಗುಂಪು ರಚಿಸಿದ ಗುಂಪು ತ್ರಿಶೂರ್‍ನ ಪಾಲಕ್ಕಾಡ್ ಜಿಲ್ಲೆಗಳಲ್ಲಿ ದೇವಾಲಯಗಳನ್ನು ಲೂಟಿ ಮಾಡಲು ಯೋಜಿಸಿತ್ತು. ಈ ಹಿನ್ನೆಲೆಯಲ್ಲಿ ಎನ್‍ಐಎ ಪ್ರಕರಣ ದಾಖಲಿಸಿಕೊಂಡಿದೆ.

          ಇದಾದ ಬಳಿಕ ನಬೀಲ್ ಅಹ್ಮದ್ ತಲೆಮರೆಸಿಕೊಂಡಿದ್ದಾನೆ. ಇದಕ್ಕೆ ಜಹೀರ್ ಸಹಾಯ ಮಾಡಿದ್ದ. ನಬೀಲ್ ಅಹಮದ್ ಅವನೂರಿನ ಲಾಡ್ಜ್ ಒಂದರಲ್ಲಿ ತಲೆಮರೆಸಿಕೊಂಡಿದ್ದ. ಒಂದು ತಿಂಗಳ ಕಾಲ ಜಹೀರ್ ಹೆಸರಿನಲ್ಲಿ ಲಾಡ್ಜ್‍ನಲ್ಲಿ ರೂಂ ತೆಗೆದುಕೊಳ್ಳಲಾಗಿತ್ತು. ಆದರೆ ನಿನ್ನೆ ಎನ್‍ಐಎ ಇಲ್ಲಿ ವಾಸವಾಗಿದ್ದ ನಬೀಲ್ ಎಂಬುದಕ್ಕೆ ದಾಖಲೆಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆಯಲಾಯಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries