ತಿರುವನಂತಪುರ: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪಡಿತರ ವರ್ತಕರು ಮುಷ್ಕರಕ್ಕೆ ಮುಂದಾಗಿದ್ದಾರೆ. ಸೆ.11ರಂದು ರಾಜ್ಯಾದ್ಯಂತ ಪಡಿತರ ಅಂಗಡಿಗಳನ್ನು ಮುಚ್ಚಲು ನಿರ್ಧರಿಸಲಾಗಿದೆ.
ಕಿಟ್ ವಿತರಣೆಗಾಗಿ ವರ್ತಕರಿಗೆ 11 ತಿಂಗಳ ಬಾಕಿ ಪಾವತಿ, ವೇತನ ಪ್ಯಾಕೇಜ್ ಪರಿಷ್ಕರಣೆ ಮತ್ತು ಇ-ಪಿಒಎಸ್ ಯಂತ್ರದ ನಿರಂತರ ದೋಷಗಳನ್ನು ಸಂಪೂರ್ಣ ಸರಿಪಡಿಸುವುದು ಮುಂತಾದ ಬೇಡಿಕೆಗಳನ್ನು ಆಧರಿಸಿ ಮುಷ್ಕರ ನಡೆಸಲಾಗಿದೆ.
ಈ ಬೇಡಿಕೆಗಳ ಕುರಿತು ನಿನ್ನೆ ಆಹಾರ ಸಚಿವರೊಂದಿಗೆ ಸಭೆ ನಡೆಸಲಾಯಿತು. ಆದರೆ ಸಭೆಯಲ್ಲಿ ಯಾವುದೇ ಸಕಾರಾತ್ಮಕ ಕ್ರಮಗಳು ವ್ಯಕ್ತವಾಗದ ಹಿನ್ನೆಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಕೇರಳ ರಾಜ್ಯ ಚಿಲ್ಲರೆ ಪಡಿತರ ವಿತರಕರ ಸಂಘದ ಪದಾಧಿಕಾರಿಗಳು ಕೋಝಿಕ್ಕೋಡ್ನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.