HEALTH TIPS

ವಿಹಿಂಪ ವತಿಯಿಂದ ಅಶ್ವತ್ಥೋಪನಯನ, ವಿವಾಹೋತ್ಸವ

 

               ಕಾಸರಗೋಡು: ವಿಶ್ವ ಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಸಮಿತಿ , ಹೊಸಂಗಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಅಶ್ವತ್ಥೋಪನಯನ ಹಾಗೂ ವಿವಾಹೋತ್ಸವ ಮತ್ತು ಸಾಮೂಹಿಕ ಅಶ್ವತ್ಥನಾರಾಯಣ ಪೂಜೆ ಹೊಸಂಗಡಿಯಲ್ಲಿರುವ ವಿಹಿಂಪ ಜಿಲ್ಲಾ ಕಾರ್ಯಾಲಯದಲ್ಲಿ ಸೆ. 21ರಂದು ಜರುಗಲಿದೆ.

              ಕಾರ್ಯಕ್ರಮದ ಅಂಗವಾಗಿ ಸೆ. 20ರಂದು ಸಂಜೆ 5ಕ್ಕೆ ದೇವತಾ ಪ್ರಾರ್ಥನೆ, 5.30ಕ್ಕೆ ವೈದಿಕ ಕರ್ಯಖ್ರಮ, 7.30ಕ್ಕೆ ಮಹಾಪೂಜೆ ನಡೆಯುವುದು. 21ರಂದು ಬೆಳಗ್ಗೆ 8ಕ್ಕೆ ಗಣಪತಿ ಹೋಮ, 9.13ಕ್ಕೆ ಅಶ್ವತ್ತೋಪನಯನ, ಅಶ್ವತ್ಥ ವಿವಾಹೋತ್ಸವ, ಅಶ್ವತ್ಥನಾರಾಯಣ ಪೂಜೆ ನಡೆಯುವುದು. ಮಧ್ಯಾಹ್ನ 12ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಿಹಿಂಪ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸುವರು. ಆರೆಸ್ಸೆಸ್ ಮಂಗಳೂರು ವಇಭಾಗ ಸಂಘಚಾಲಕ ಗೋಪಾಲ ಚೆಟ್ಟಿಯಾರ್ ಪೆರ್ಲ, ವಿಹಿಂಪ ಕೇರಳ ರಆಜ್ಯ ಕಾರ್ಯದರ್ಶಿ ರಾಜಶೇಖರನ್ ಗೌರವ ಉಪಸ್ಥಿತಿ ವಹಿಸುವರು. ಮಾಜಿ ಕೇಂದ್ರ ಸಚಿವ, ರಾಷ್ಟ್ರೀಯ ವಿರಾಟ್ ಹಿಂದೂ ಶಂಘ ಅಧ್ಯಕ್ಷ ಡಾ. ಸುಬ್ರಹ್ಮನ್ಯ ಸ್ವಾಮಿ ವಕೀಲೆ, ಮೀರಾ ರಾಘವೇಂದ್ರ, ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ  ಸೇರಿದಂತೆ ಪ್ರಮುಖರು ಅತಿಥಿಗಳಾಗಿ ಭಾಗವಹಿಸುವರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries