HEALTH TIPS

ಕಲಾವಿದರಿಗೆ ಅಮೃತ ಪ್ರಶಸ್ತಿ ಪ್ರದಾನ ಮಾಡಿದ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌

             ವದೆಹಲಿ: ಸಂಗೀತ, ನಾಟಕ ಹಾಗೂ ನೃತ್ಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕರ್ನಾಟಕದ ನಾಲ್ವರು ಸಾಧಕರು ಸೇರಿ ವಿವಿಧ ರಾಜ್ಯಗಳ 84 ಕಲಾವಿದರಿಗೆ 'ಸಂಗೀತ ನಾಟಕ ಅಕಾಡೆಮಿ ಅಮೃತ ಪ್ರಶಸ್ತಿ'ಯನ್ನು ಶನಿವಾರ ಇಲ್ಲಿ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರು ಪ್ರದಾನ ಮಾಡಿದರು.

            ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ವತಿಯಿಂದ ಈ ಪ್ರಶಸ್ತಿಯನ್ನು ಕರ್ನಾಟಕದ ಕಲಾವಿದರಾದ ಅನಸೂಯ ಕುಲಕರ್ಣಿ (ಕರ್ನಾಟಕ ಸಂಗೀತ), ಲಲಿತಾ ಶ್ರೀನಿವಾಸನ್‌ (ಭರತನಾಟ್ಯ), ಅಬ್ಬೂರು ಜಯತೀರ್ಥ (ರಂಗಭೂಮಿ) ಹಾಗೂ ಚನ್ನದಾಸರ ಮಾರೆಪ್ಪ (ಜಾನಪದ ಕಲೆ) ಅವರಿಗೆ ಧನಕರ್‌ ಪ್ರದಾನ ಮಾಡಿ, ಗೌರವಿಸಿದರು.

            ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಧನಕರ್, 'ಈ ಎಲ್ಲಾ ಕಲಾವಿದರು 75 ವರ್ಷಗಳಲ್ಲಿ ಯಾವತ್ತೂ ಈ ರೀತಿ ಗೌರವಕ್ಕೆ ಭಾಜನರಾಗಿಲ್ಲ. ಇವರನ್ನು ಗುರುತಿಸಿ, ಗೌರವಿಸುವ ಮೂಲಕ ನಾವು ಭಾರತೀಯ ಸಂಸ್ಕೃತಿಯನ್ನು ಗೌರವಿಸುತ್ತಿದ್ದೇವೆ. ಇದು ವಿಶ್ವದಲ್ಲಿ ಭಾರತದ ಕೀರ್ತಿಯನ್ನೂ ಹೆಚ್ಚಿಸುತ್ತದೆ' ಎಂದು ಹೇಳಿದರು.

                ಪ್ರಶಸ್ತಿಯು ಒಂದು ಲಕ್ಷ ನಗದು, ತಾಮ್ರಪತ್ರ ಮತ್ತು ಶಾಲು ಒಳಗೊಂಡಿದೆ. ಪ್ರಶಸ್ತಿಗೆ 70 ಮಂದಿ ಪುರುಷ ಕಲಾವಿದರು ಮತ್ತು 14 ಮಂದಿ ಮಹಿಳಾ ಕಲಾವಿದರನ್ನು ಗುರುತಿಸಲಾಗಿತ್ತು.

ಕಾನೂನು ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌, ಸಂಸ್ಕೃತಿ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ, ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷೆ ಸಂಧ್ಯಾ ಪುರೇಚಾ ಅವರು ಹಾಜರಿದ್ದರು.

                   ಸಂಗೀತ ನಾಟಕ ಅಕಾಡೆಮಿಯು ನಾಲ್ಕು ದಿನಗಳ ಉತ್ಸವವನ್ನೂ ಅಕಾಡೆಮಿ ಸಂಕೀರ್ಣದಲ್ಲಿ ಆಯೋಜಿಸಿದ್ದು, 16ರಂದು ಆರಂಭವಾಗಿರುವ ಉತ್ಸವವು ಸೆ.20ರವರೆಗೆ ನಡೆಯಲಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries