. ಕಾಸರಗೋಡು: ಸಾಮಾಜಿಕ, ಸಾಂಸ್ಕøತಿಕ ಸಂಘಟನೆ ರಂಗ ಚಿನ್ನಾರಿ ಕಾಸರಗೋಡು ಮತ್ತು ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಕಾರದೊಂದಿಗೆ ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿದ್ಯಾರ್ಥಿಗಳ ಸ್ನೆಹರಂಗ ಸಾದರಪಡಿಸುವ''ಕನ್ನಡ ವಿದ್ಯಾರ್ಥಿ ಕಲರವ'ಅ.7ರಂದು ಬೆಳಗ್ಗೆ 10ಕ್ಕೆ ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ಜರುಗಲಿದೆ.
ಖ್ಯಾತ ಚಲನಚಿತ್ರ-ರಂಗ ಭೂಮಿ ಕಲಾವಿದ ಭೋಜರಾಜ ವಾಮಂಜೂರು ಸಮಾರಂಭ ಉದ್ಘಾಟಿಸುವರು. ಸರ್ಕಾರಿ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥೆ ಎಸ್. ಸುಜಾತಾ ಅಧ್ಯಕ್ಷತೆ ವಹಿಸುವರು. ಕಾಸರಗೋಡು ನಗರಸಭಾ ಮಾಜಿ ಅಧ್ಯಕ್ಷ ಎಸ್.ಜೆ ಪ್ರಸಾದ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸ್ನೇಹರಂಗ ಮಾರ್ಗದರ್ಶಕಿ, ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಆಶಾಲತಾ ಚೇವಾರ್ ಗೌರವ ಉಪಸ್ಥಿತಿ ವಹಿಸುವರು. ರಂಗ ಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ, ಸ್ನೇಹರಂಗ ಅಧ್ಯಕ್ಷ ಲೋಹಿತ್ ಪಾಲ್ಗೊಳ್ಳುವರು.
ಕಾರ್ಯಕ್ರಮದ ಅಂಗವಾಗಿ ವೃಂದಗಾನ, ಸಮೂಹ ನೃತ್ಯ, ಕವಿತಾವಾಚನ, ಕಂಠಪಾಠ, ಭರತನಾಟ್ಯ, ಲಘುಸಂಗೀತ, ನಾಟಕ, ಯಕ್ಷಗಾನ ನೃತ್ಯ ಸೇರಿದಂತೆ ಸಾಂಸ್ಕøತಿಕ ವಐವಿಧ್ಯ ನಡೆಯಲಿರುವುದು.





