ತ್ರಿಶೂರ್: ಕಲಮಸೇರಿಯಲ್ಲಿ ಯೆಹೋವನ ಸಾಕ್ಷಿಗಳ ಸಭೆಯ ವೇಳೆ ಸಂಭವಿಸಿದ ಸ್ಫೋಟದ ತನಿಖೆ ಪ್ರಗತಿಯಲ್ಲಿರುವಾಗಲೇ ವ್ಯಕ್ತಿಯೊಬ್ಬ ಪೋಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ಬಾಂಬ್ ಇರಿಸಿದ್ದು ನಾನೆಂದು ಪೋಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.
ತ್ರಿಶೂರ್ ಕೊಡಕರ ಪೋಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ಈತ ಕೊಚ್ಚಿ ಮೂಲದವನಾಗಿದ್ದು, ಆತನನ್ನು ಪೋಲೀಸರು ವಿವರವಾಗಿ ವಿಚಾರಣೆ ನಡೆಸುತ್ತಿದ್ದಾರೆ. ಮಧ್ಯಾಹ್ನ ಒಂದೂವರೆ ಗಂಟೆಗೆ ಪೋಲೀಸ್ ಠಾಣೆ ತಲುಪಿದ್ದ. ದೃಢೀಕರಣದ ಕೊರತೆಯಿಂದಾಗಿ ಪೋಲೀಸರು ಆತನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
ಏತನ್ಮಧ್ಯೆ, ಕಣ್ಣೂರಿನಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂಬ ಖಚಿತವಲ್ಲದ ವರದಿಗಳಿವೆ.