HEALTH TIPS

ಸೈನಿಕರ ಹೊಸ ಪಿಂಚಣಿ ನೀತಿ: ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ

                ವದೆಹಲಿ: ವೈದ್ಯಕೀಯ ಕಾರಣಗಳಿಂದ ಕರ್ತವ್ಯ ನಿರ್ವಹಿಸಲು ಅಸಮರ್ಥರಾದ ಸೈನಿಕರಿಗೆ ನೀಡಲಾಗುವ ಪಿಂಚಣಿಯ ಹೊಸ ನೀತಿ ಕುರಿತಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿದ್ದಾರೆ.

                    'ಬಿಜೆಪಿಯ ಹುಸಿ ರಾಷ್ಟ್ರೀಯತೆ ಈ ನಡೆ ಮೂಲಕ ಗೋಚರವಾಗುತ್ತಿದೆ.


                ಸೈನಿಕರು, ಮಾಜಿ ಸೇನಾ ಸಿಬ್ಬಂದಿಯ ಕಲ್ಯಾಣದ ವಿರುದ್ಧ ಕೆಲಸ ಮಾಡುವಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಯಾವಾಗಲೂ ನಿರತವಾಗಿದೆ' ಎಂದು ಖರ್ಗೆ ಅವರು 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದ್ದಾರೆ.

           'ಪ್ರಸ್ತುತ, ಶೇಕಡ 40ರಷ್ಟು ಸೈನಿಕರು ವೈದ್ಯಕೀಯ ಕಾರಣಗಳಿಂದ ಕರ್ತವ್ಯ ನಿರ್ವಹಿಸಲು ಅಸಮರ್ಥರಾಗಿದ್ದಾರೆ. ಪ್ರಸ್ತುತ ನೀತಿಯು ಈ ಹಿಂದಿನ ಅನೇಕ ತೀರ್ಪುಗಳು, ನಿಯಮಗಳು ಮತ್ತು ಸ್ವೀಕಾರಾರ್ಹ ಮಾನದಂಡಗಳನ್ನು ಉಲ್ಲಂಘಿಸುತ್ತದೆ' ಎಂದಿದ್ದಾರೆ.

           '2019ರ ಜೂನ್‌ನಲ್ಲಿ ಸಹ ಈ ಪಿಂಚಣಿ ಮೇಲೆ ತೆರಿಗೆ ಹೇರುವುದಾಗಿ ಘೋಷಿಸಿದ್ದ ಮೋದಿ ನೇತೃತ್ವದ ಸರ್ಕಾರ, ಆಗಲೂ ಸೈನಿಕರಿಗೆ ದ್ರೋಹ ಎಸಗಿತ್ತು' ಎಂದು ಕಿಡಿಕಾರಿದ್ದಾರೆ.

               ಮಾಧ್ಯಮಗಳ ವರದಿ ಪ್ರಕಾರ, ವೈದ್ಯಕೀಯ ಕಾರಣಗಳಿಂದ ಕರ್ತವ್ಯ ನಿರ್ವಹಿಸಲು ಅಸಮರ್ಥರಾದ ಸೈನಿಕರು ಹಾಗೂ ಮೃತ ಸೈನಿಕರ ವಿಧವಾ ಪತ್ನಿಯರಿಗೆ ನೀಡಲಾಗುವ ಪಿಂಚಣಿಯ ನೂತನ ನೀತಿಗೆ ಅಖಿಲ ಭಾರತೀಯ ಮಾಜಿ ಸೈನಿಕರ ಕಲ್ಯಾಣ ಸಂಘವು ವಿರೋಧ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries