HEALTH TIPS

ಮುಂಬೈ ವಿಮಾನ ನಿಲ್ದಾಣಕ್ಕೆ ಬೆದರಿಕೆ ಪ್ರಕರಣ: ತಿರುವನಂತಪುರಂನಲ್ಲಿ ಮತ್ತೊಬ್ಬನ ಬಂಧನ

                ತಿರುವನಂತಪುರಂ: ಮುಂಬೈ ವಿಮಾನ ನಿಲ್ದಾಣಕ್ಕೆ ಬಾಂಬ್ ಇರಿಸಿ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಕೇರಳದ ಮತ್ತೊಬ್ಬ ವ್ಯಕ್ತಿಯನ್ನು ಎಟಿಎಸ್ ಬಂಧಿಸಿದೆ.

             ಕಿಲಿಮಾನೂರು ಚೂತ ಮೂಲದ ಫೆಬಿನ್ ಶಾ(23) ಬಂಧಿತ ಆರೋಪಿ. ಫ್ಯಾಬಿನ್ ಶಾ ಷೇರು ಮಾರುಕಟ್ಟೆಯಲ್ಲಿ ಆನ್‍ಲೈನ್ ವ್ಯಾಪಾರಿ.

                23 ವರ್ಷದ ಫ್ಯಾಬಿನ್ ಶಾ ತನ್ನ ತಾಯಿಯ ಬ್ರಾಡ್ ಬ್ಯಾಂಡ್ ಸಂಪರ್ಕವನ್ನು ಬಳಸಿಕೊಂಡು ಇ-ಮೇಲ್ ಮೂಲಕ ಬೆದರಿಕೆ ಸಂದೇಶವನ್ನು ಕಳುಹಿಸಿದ್ದಾನೆ. ಬಿಟ್ ಕಾಯಿನ್ ರೂಪದಲ್ಲಿ ಕೋಟ್ಯಂತರ ರೂಪಾಯಿ ಪಾವತಿಸುವಂತೆ ಸಂದೇಶ ನೀಡಲಾಗಿತ್ತು. ಇದನ್ನು ಒಪ್ಪಿಕೊಳ್ಳದಿದ್ದಲ್ಲಿ ವಿಮಾನ ನಿಲ್ದಾಣದ ಮೇಲೆ ಬಾಂಬ್ ದಾಳಿ ನಡೆಸುವುದಾಗಿ ಬೆದರಿಕೆ ಸಂದೇಶದಲ್ಲಿ ಫೆಬಿನ್ ಹೇಳಿದ್ದ.

              ಆತನನ್ನು ಕಿಲಿಮಾನೂರು ಪೋಲೀಸ್ ಠಾಣೆಯಿಂದ ಅಟ್ಟಿಂಗಲ್ ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು. ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಮುಂಬೈಗೆ ಕರೆದೊಯ್ಯಲಾಗುವುದು ಎಂದು ತಿಳಿದುಬಂದಿದೆ. ನಿನ್ನೆ ಅಮೀನ್ ಎಂಬಾತನನ್ನೂ  ತಿರುವನಂತಪುರದಿಂದ ಎಟಿಎಸ್ ವಶಕ್ಕೆ ತೆಗೆದುಕೊಂಡಿತ್ತು.

        23ರಂದು ಬೆಳಗ್ಗೆ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿತ್ತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries