HEALTH TIPS

ಕಾವಳಂ ಶಶಿಕುಮಾರ್ ರಿಗೆ ಕೆ ರಾಧಾಕೃಷ್ಣನ್ ಪ್ರಶಸ್ತಿ

               ಕೊಚ್ಚಿ: ಕೊಚ್ಚಿ ಅಂತಾರಾಷ್ಟ್ರೀಯ ಪುಸ್ತಕೋತ್ಸವ ಸಮಿತಿಯ ಆಶ್ರಯದಲ್ಲಿ ಕೆ. ರಾಧಾಕೃಷ್ಣನ್ ಪ್ರಶಸ್ತಿಗೆ ಪತ್ರಕರ್ತ ಕಾವಳಂ ಶಶಿಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.

               ಶಶಿಕುಮಾರ್ ಅವರ ಧರ್ಮಮಾಯಣಂ ಸಾಹಿತ್ಯ ಕೃತಿಗೆ ಈ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯು ರೂ 10,000, ಫಲಕ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

              ಕೊಚ್ಚಿ ಅಂತಾರಾಷ್ಟ್ರೀಯ ಪುಸ್ತಕೋತ್ಸವ ಸಮಿತಿ ಆಯೋಜಿಸಿರುವ ಇಪ್ಪತ್ತಾರನೇ ಅಂತಾರಾಷ್ಟ್ರೀಯ ಪುಸ್ತಕೋತ್ಸವದ ನಿಮಿತ್ತ ಪ್ರಶಸ್ತಿ ಪ್ರದಾನ ನಡೆಸಲಾಗುತ್ತದೆ. 1989ರಿಂದ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಕಾವಳಂ ಶಶಿಕುಮಾರ್ ಪ್ರಸ್ತುತ ಕೋಝಿಕ್ಕೋಡ್ ಜನ್ಮಭೂಮಿಯಲ್ಲಿ ಉಪ ಸಂಪಾದಕರಾಗಿದ್ದಾರೆ. ಅನೇಕ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಮಂಕೊಂಬ್ ಗೋಪಾಲಕೃಷ್ಣನ್ ಅವರು ಡಿಸೆಂಬರ್ 3 ರಂದು ಅಂತಾರಾಷ್ಟ್ರೀಯ ಪುಸ್ತಕೋತ್ಸವ ವೇದಿಕೆಯಲ್ಲಿ  ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries