HEALTH TIPS

ಅಯ್ಯನ್ ಆಪ್ ಬಿಡುಗಡೆ: ದೇವಾಲಯದ ಆಚರಣೆಗಳಿಂದ ಹಿಡಿದು ಅಗತ್ಯ ಸೇವೆಗಳವರೆಗೆ ಸವಿವರ ಲಭ್ಯ

                     ಪತ್ತನಂತಿಟ್ಟ: ಅಯ್ಯನ್ ಮೊಬೈಲ್ ಆ್ಯಪ್ ಅನ್ನು ಅರಣ್ಯ ಸಚಿವ ಎ.ಕೆ.ಸಶೀಂದ್ರನ್ ಬಿಡುಗಡೆ ಮಾಡಿದರು. ಶಬರಿಮಲೆ ಯಾತ್ರೆಗೆ ಬರುವ ಭಕ್ತರಿಗೆ ಸಹಾಯ ಮಾಡಲು ಈ ಅಪ್ಲಿಕೇಶನ್ ಅನ್ನು ಮಾಡಲಾಗಿದೆ.

                         ಪಂಪಾ, ಸನ್ನಿಧಿ, ಸ್ವಾಮಿ ಅಯ್ಯಪ್ಪನ್ ರಸ್ತೆ, ಪಂಪಾ-ನೀಲಿಮಲೆ - ಸನ್ನಿಧಾನಂ ಎರುಮೇಲಿ- ಅಝುಟಕಡವ್- ಪಂಬಾ, ಸತ್ರಂ - ಉಪ್ಪುಪಾರ - ಸನ್ನಿಧಾನಂ ಮಾರ್ಗಗಳಲ್ಲಿ ಲಭ್ಯವಿರುವ ಸೇವೆಗಳು ಈ ಅಪ್ಲಿಕೇಶನ್ ಮೂಲಕ ಲಭ್ಯವಿದೆ. ಪೆರಿಯಾರ್ ವನ್ಯಜೀವಿ ಅಭಯಾರಣ್ಯ ಪಶ್ಚಿಮ ವಿಭಾಗದ ನೇತೃತ್ವದಲ್ಲಿ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ.

                      ಅಪ್ಲಿಕೇಶನ್ ಧಾರ್ಮಿಕ ಶಿμÁ್ಟಚಾರ ಮತ್ತು ಅಯ್ಯಪ್ಪ ಭಕ್ತರು ಅನುಸರಿಸಬೇಕಾದ ಸಾಮಾನ್ಯ ಸೂಚನೆಗಳನ್ನು ಸಹ ಒಳಗೊಂಡಿದೆ. ಮಲಯಾಳಂ, ತಮಿಳು, ಕನ್ನಡ, ತೆಲುಗು ಮತ್ತು ಹಿಂದಿ ಎಂಬಂತೆ ಐದು ಭಾಷೆಗಳಲ್ಲಿ ಸೇವೆಗಳು ಲಭ್ಯವಿವೆ. ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸಲು ತುರ್ತು ಸಂಖ್ಯೆಗಳನ್ನು ಅಪ್ಲಿಕೇಶನ್ ಒಳಗೊಂಡಿದೆ. ಮತ್ತೊಂದು ವೈಶಿಷ್ಟ್ಯವೆಂದರೆ ಅಪ್ಲಿಕೇಶನ್ ಆನ್‍ಲೈನ್ ಮತ್ತು ಆಫ್‍ಲೈನ್‍ನಲ್ಲಿ ಕಾರ್ಯನಿರ್ವಹಿಸುತ್ತದೆ. ಅಪ್ಲಿಕೇಶನ್ ಅನ್ನು ನೇರವಾಗಿ ಗೂಗಲ್ ಪ್ಲೇ ಸ್ಟೋರ್ ನಿಂದ ಸ್ಥಾಪಿಸಬಹುದು. ಪರ್ಯಾಯವಾಗಿ, ಕಾನನ ಪಥ ಗೇಟ್‍ಗಳಲ್ಲಿ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಅಪ್ಲಿಕೇಶನ್ ಅನ್ನು ಸ್ಥಾಪಿಸಬಹುದು.

              ಸಾಂಪ್ರದಾಯಿಕ ಕಾನನ ಮಾರ್ಗಗಳಲ್ಲಿ ಸೇವಾ ಕೇಂದ್ರಗಳು, ವೈದ್ಯಕೀಯ ತುರ್ತು ಚಿಕಿತ್ಸಾ ಘಟಕ, ವಸತಿ, ಆನೆ ದಳ, ಸಾರ್ವಜನಿಕ ಶೌಚಾಲಯಗಳು, ಪ್ರತಿ ನೆಲೆಯಿಂದ ಸನ್ನಿಧಾನಂವರೆಗಿನ ಅಂತರ, ಅಗ್ನಿಶಾಮಕ ದಳ, ಪೋಲೀಸ್ ಏಡ್ ಪೋಸ್ಟ್, ಇಕೋ ಶಾಪ್, ಉಚಿತ ಕುಡಿಯುವ ನೀರು ವಿತರಣಾ ಕೇಂದ್ರಗಳು ಮತ್ತು ಒಂದು ಸ್ಥಳದಿಂದ ಮತ್ತೊಂದೆಡೆಗೆ ದೂರದ ಬಗ್ಗೆ ಮಾಹಿತಿ ಅಪ್ಲಿಕೇಶನ್‍ನಲ್ಲಿ ಸಂಪೂರ್ಣ ಸೇರಿಸಲಾಗಿದೆ.

             ಆ್ಯಪ್ ಮೂಲಕ ಭಕ್ತರು ತಾವು ಆಯ್ಕೆ ಮಾಡಿಕೊಂಡ ಮಾರ್ಗಗಳಲ್ಲಿ ವಿವಿಧ ಎಚ್ಚರಿಕೆಗಳನ್ನು ಪಡೆಯಬಹುದು. ಕಾಂಜಿರಪಳ್ಳಿ ಮೂಲದ ಲೆಪರ್ಡ್ ಟೆಕ್ ಲ್ಯಾಬ್ ಪ್ರೈವೇಟ್ ಲಿಮಿಟೆಡ್ ನ ತಾಂತ್ರಿಕ ನೆರವಿನೊಂದಿಗೆ ಸಿದ್ಧಪಡಿಸಿರುವ ಆ್ಯಪ್ ಸಾಂಪ್ರದಾಯಿಕ ಪಥಗಳಲ್ಲಿ ಅಯ್ಯಪ್ಪ ಭಕ್ತರಿಗೆ ಸಹಕಾರಿಯಾಗುವಂತೆ ವಿನ್ಯಾಸಗೊಳಿಸಲಾಗಿದೆ. ಶಬರಿಮಲೆ ದೇವಸ್ಥಾನದ ಪ್ರಮುಖ ಐತಿಹಾಸಿಕ ಅಂಶಗಳನ್ನು ಸಹ ಅಪ್ಲಿಕೇಶನ್ ಒಳಗೊಂಡಿದೆ. ಪೆರಿಯಾರ್ ವನ್ಯಜೀವಿ ಅಭಯಾರಣ್ಯದ ವೈಶಿಷ್ಟ್ಯಗಳು ಸಹ ಲಭ್ಯವಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries