ಶಬರಿಮಲೆ: ಆಂಧ್ರಪ್ರದೇಶದ ಹಿಂದುಳಿದ ವಿಭಾಗ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಚೆಲ್ಲುಬೋಯಿನ ಶ್ರೀನಿವಾಸ ವೇಣುಗೋಪಾಲಕೃಷ್ಣ ಅವರು ಶನಿವಾರ ಸಂಜೆ ಮಕರ ಬೆಳಕು ಮಹೋತ್ಸವ ಉದ್ಘಾಟನೆ ವೇಳೆ ಶಬರಿಮಲೆಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಸಚಿವರೊಂದಿಗೆ ಅವರ ಪತ್ನಿ, ಕುಟುಂಬ ಹಾಗೂ ಸಹೋದ್ಯೋಗಿಗಳು ಭೇಟಿ ನೀಡಿದ್ದರು.
ಶಬರಿಮಲೆಗೆ ಭೇಟಿ ನೀಡುವುದು ದೊಡ್ಡ ಪುಣ್ಯ ಮತ್ತು ಅಯ್ಯಪ್ಪ ಸ್ವಾಮಿ ಎಲ್ಲರ ಯಶಸ್ಸಿಗೆ ಆಶೀರ್ವಾದ ಮಾಡುತ್ತಾನೆ ಎಂದು ಸಚಿವರು ಹೇಳಿದರು. ಅಯ್ಯಪ್ಪನ ಆಶೀರ್ವಾದದಿಂದ ಆಂಧ್ರದಲ್ಲಿ ಬಡತನ ನಿರ್ಮೂಲನೆ, ಸಾಮಾಜಿಕ ನ್ಯಾಯ ದೊರಕಿಸುವ ಕೆಲಸ ಮಾಡುತ್ತಿರುವೆ ಎಂದರು.