HEALTH TIPS

ರಾಮಮಂದಿರ ಉದ್ಘಾಟನೆಗೆ ಯಾರೇ ಹೋದರೂ ಕೇರಳ ಮುಸ್ಲಿಮರ ಭಾವನೆಗೆ ಧಕ್ಕೆ ಇಲ್ಲ: ಉಲೆಮಾ

                 ತಿರುವನಂತಪುರ: 'ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಸಮಾರಂಭದಲ್ಲಿ ಯಾರೇ ಭಾಗವಹಿಸಿದರೂ ಕೇರಳ ಮುಸ್ಲಿಮರ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲ' ಎಂದು ಸುನ್ನಿ ವಿದ್ವಾಂಸರ ಸಂಘ ಸಮಸ್ತ ಕೇರಳ ಜೆಮ್-ಇಯ್ಯತ್‌ಉಲ್ ಉಲೆಮಾ ಶನಿವಾರ ಸ್ಪಷ್ಟಪಡಿಸಿದೆ.

                ಜನವರಿ 22 ರಂದು ನಡೆಯುವ ಸಮಾರಂಭದ ಆಹ್ವಾನ ಸ್ವೀಕರಿಸಿರುವ ಕಾಂಗ್ರೆಸ್ ಪಕ್ಷವನ್ನು ಟೀಕಿಸಿ, ಸಮಸ್ತದ ಮುಖವಾಣಿ 'ಸುಪ್ರಭಾತಂ' ಸಂಪಾದಕೀಯದಲ್ಲಿ 'ಕಾಂಗ್ರೆಸ್ ಮೃದು ಹಿಂದುತ್ವ ಧೋರಣೆ ಹೊಂದಿದೆ' ಎಂದು ಆರೋಪಿಸಲಾಗಿದೆ.

                   ಈ ಸಂಪಾದಕೀಯದ ಬಗ್ಗೆ ರಾಜ್ಯದಲ್ಲಿ ಎದ್ದಿರುವ ಕೋಲಾಹಲದ ಬೆನ್ನಲ್ಲೇ ಸಮಸ್ತ ಈ ಸ್ಪಷ್ಟನೆಯನ್ನು ನೀಡಿದೆ.

                ಕೋಯಿಕ್ಕೋಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಮಸ್ತದ ಮುಖ್ಯಸ್ಥ ಜಿಫ್ರಿ ಮುತ್ತುಕೋಯ ತಂಗಲ್, 'ಪ್ರತಿ ರಾಜಕೀಯ ಪಕ್ಷವು ಅವರ ರಾಜಕೀಯ ನೀತಿಗೆ ಅನುಗುಣವಾಗಿ ಆಹ್ವಾನವನ್ನು ಸ್ವೀಕರಿಸಬಹುದು ಅಥವಾ ತಿರಸ್ಕರಿಸಬಹುದು. ರಾಮಮಂದಿರ ಉದ್ಘಾಟನೆಯಲ್ಲಿ ಯಾರು ಭಾಗವಹಿಸಿದರೂ ಅದು ಕಾಂಗ್ರೆಸ್ ಆಗಿದ್ದರೂ ಸಹ ಸಮುದಾಯದ ಭಾವನೆಗಳಿಗೆ ಯಾವುದೇ ಧಕ್ಕೆಯಾಗದು. ನಾವು ನಮ್ಮ ಸಮುದಾಯದ ಭಾವನೆಗಳ ಬಗ್ಗೆ ಕಾಳಜಿ ಹೊಂದಿದ್ದೇವೆ' ಎಂದು ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries