ಪತ್ತನಂತಿಟ್ಟ: ಶಬರಿಮಲೆ ಸನ್ನಿಧಿ ಪ್ರವೇಶಿಸಲು ಪೆÇಲೀಸರು ಪಾಸ್ ನೀಡದ ಹಿನ್ನೆಲೆಯಲ್ಲಿ ಅಯ್ಯಪ್ಪ ಭಕ್ತರು ಪ್ರತಿಭಟನೆ ನಡೆಸಿದರು.
ವಂಡಿಪೆರಿಯಾರ್ ಸತ್ರದಲ್ಲಿ ಅಯ್ಯಪ್ಪ ಭಕ್ತರು ಪ್ರತಿಭಟನೆ ನಡೆಸಿದರು. ಕಾನನ ಪಥದ ಮೂಲಕ ಸನ್ನಿಧಾನಕ್ಕೆ ಪ್ರವೇಶಿಸಲು ಪೋಲೀಸರು ಪಾಸ್ ನೀಡದ ಹಿನ್ನೆಲೆಯಲ್ಲಿ ಭಕ್ತರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸನ್ನಿಧಾನಕ್ಕೆ ಪಾಸ್ ಇಲ್ಲದೆ ಭಕ್ತರಿಗೆ ಪ್ರವೇಶ ಕಲ್ಪಿಸಲಾಯಿತು. ಇದೇ ವೇಳೆ ಶಬರಿಮಲೆಗೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಕೊಂಚ ಏರಿಕೆಯಾಗಿದೆ. ಇಂದು ಮುಂಜಾನೆ 1 ಗಂಟೆಯಿಂದ 6 ಗಂಟೆಯವರೆಗೆ 21,000 ಜನರು ಭೇಟಿ ನೀಡಿದ್ದಾರೆ. ದರ್ಶನಕ್ಕಾಗಿ ಇಂದು 90,000 ಜನರು ವರ್ಚುವಲ್ ಕ್ಯೂ ಮೂಲಕ ಬುಕ್ ಮಾಡಿದ್ದಾರೆ.
ನಿನ್ನೆ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿತ್ತು. ಪಂಬಾದಲ್ಲಿ ನೂಕುನುಗ್ಗಲು ಉಂಟಾಗಿದ್ದು, ಅನೇಕ ಜನರು ಅರಣ್ಯ ಮಾರ್ಗದ ಮೂಲಕ ಸನ್ನಿಧಾನ ತಲುಪುತ್ತಿದ್ದಾರೆ.