HEALTH TIPS

ಶಾಸಕಾಂಗ ಗದ್ದಲ ಪ್ರಕರಣ: ಯುಡಿಎಫ್ ನ ನಾಲ್ವರು ಮಾಜಿ ಶಾಸಕರನ್ನು ಆರೋಪಿಗಳಾಗಿ ಸೇರ್ಪಡೆ

                ತಿರುವನಂತಪುರಂ: ವಿಧಾನಸಭೆಯ ಗದ್ದಲ ಪ್ರಕರಣದಲ್ಲಿ ಮತ್ತೆ ನಾಲ್ವರು ಮಾಜಿ ಯುಡಿಎಫ್ ಶಾಸಕರನ್ನು ಆರೋಪಿಗಳನ್ನಾಗಿ ಸೇರಿಸಲಾಗಿದೆ. ಯುಡಿಎಫ್ ಶಾಸಕರಾದ ಕೆ.ಶಿವದಾಸನ್ ನಾಯರ್, ಡೊಮಿನಿಕ್ ಪ್ರಸೆಂಟೇಶನ್, ವಾಹಿದ್, ಎ.ಟಿ. ಜಾರ್ಜ್ ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗಿದೆ.

                ಒಂದು ತಿಂಗಳ ಹಿಂದೆ ಮ್ಯೂಸಿಯಂ ಪೆÇಲೀಸರು ದಾಖಲಿಸಿದ್ದ ಪ್ರಕರಣವನ್ನು ಎರಡು ದಿನಗಳ ಹಿಂದೆ ಕ್ರೈಂಬ್ರಾಂಚ್ ಗೆ ಹಸ್ತಾಂತರಿಸಲಾಗಿತ್ತು. ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದಾದ ಸೆಕ್ಷನ್‍ಗಳನ್ನು ಸೇರಿಸಲಾಗಿದೆ. ಆರೋಪಿಗಳ ಮೇಲೆ ಕ್ರಿಮಿನಲ್ ಆಕ್ಟ್, ದೇಹಕ್ಕೆ ಹಾನಿ ಉಂಟುಮಾಡುವುದು, ತಡೆ ಒಡ್ಡುವುದು ಇತ್ಯಾದಿ ಆರೋಪಗಳನ್ನು ಹೊರಿಸಲಾಗಿದೆ. ಎಫ್‍ಐಆರ್‍ನಲ್ಲಿ, ಮೊದಲ ಆರೋಪಿ ಶಿವದಾಸನ್ ನಾಯರ್ ಉದ್ದೇಶಪೂರ್ವಕವಾಗಿ ಗೀತಾಗೋಪಿಯನ್ನು ಕೆಳಗೆ ತಳ್ಳಿದ್ದಾರೆ ಮತ್ತು ಇತರ ಮೂವರು ಅವರನ್ನು ತಡೆದಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೂ ಮುನ್ನ ಈ ಪ್ರಕರಣದಲ್ಲಿ ಎಲ್‍ಡಿಎಫ್ ನಾಯಕರಾದ ಸಚಿವ ವಿ. ಶಿವನ್ ಕುಟ್ಟಿ, ಇ.ಪಿ.ಜಯರಾಜನ್, ಕೆ.ಟಿ. ಜಲೀಲ್, ಕೆ. ಅಜಿತ್, ಕೆ. ಕುಂಞಹಮ್ಮದ್, ಸಿ.ಕೆ. ಸದಾಶಿವನ್ ಮತ್ತಿತರರು ಭಾಗಿಯಾಗಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries