ಉಪ್ಪಳ: ಐತಿಹಾಸಿಕ ಮಂಗಲ್ಪಾಡಿ ಖಾಸಿ ಕುಂಜಹಮ್ಮದ್ ಮುಸ್ಲಿಯಾರ್ (ನ.ಅ) ಮಂಗಲ್ಪಾಡಿ ಖಾಸಿಯಾರ್ ಉಪ್ಪಾಪ ಮಖಾಂ ಉರೂಸ್ ಹಾಗೂ ಆರು ದಿನಗಳ ಧಾರ್ಮಿಕ ಪ್ರವಚನ ಜ.8ರಿಂದ 14ರವರೆಗೆ ಮಂಗಲ್ಪಾಡಿ ಖಾಸಿ ನಗರದುಲ್ಲಿ ನಡೆಯಲಿದೆ ಎಂದು ಮಂಗಲ್ಪಾಡಿ ಖಾಸಿ ಸಮಿತಿಯ ಪದಾಧಿಕಾರಿಗಳು ಬುಧವಾರ ಕುಂಬಳೆ ಪ್ರೆಸ್ ಪೋರಂನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜನವರಿ 8ರಂದು ಸೋಮವಾರ ಮಧ್ಯಾಹ್ನ 2 ಗಂಟೆಗೆ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 3.30ಕ್ಕೆ ಹಾಜಿ ಎಂ.ಕೆ.ಮುಹಮ್ಮದ್ ಮುಸ್ಲಿಯಾರ್ ಉಪಸ್ಥಿತಿಯಲ್ಲಿ ಕುಂಬೋಳ್ ಕೆ.ಎಸ್. ಆಟಕ್ಕೋಯ ತಂಙಳ್ ಧ್ವಜಾರೋಹಣ ಮಾಡಲಿದ್ದಾರೆ. ನಂತರ ಸೈಯದ್ ಕುಂಞÂಕೋಯ ತಂಙಳ್ ಪ್ರಾರ್ಥನೆ ನೆರವೇರಿಸುವರು. ಸಂಜೆ 4 ಕ್ಕೆ ಧಾರ್ಮಿಕ ಸಾಮರಸ್ಯ ಸಾಂಸ್ಕøತಿಕ ಸಮ್ಮೇಳನವನ್ನು ಶಾಸಕ ಎ.ಕೆ.ಎಂ.ಅಶ್ರಫ್ ಉದ್ಘಾಟಿಸುವರು. ಅಬ್ದುಲ್ಲ ಕುಂಞÂ ಫೈಝಿ ಮೂಸಾ ಮುಕ್ರಿ ಅಧ್ಯಕ್ಷತೆ ವಹಿಸುವರು. ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಅಬ್ದುಲ್ ಹಮೀದ್ ತೋಟ ಮಾತನಾಡುವರು. ರಾತ್ರಿ 8.30ಕ್ಕೆ ಧಾರ್ಮಿಕ ಉಪನ್ಯಾಸವನ್ನು ಝೈನುಲ್ ಆಬಿದೀನ್ ತಂಙಳ್ ಅಲ್ ಬುಖಾರಿ ಕುನ್ನಂಗೈ ಉದ್ಘಾಟಿಸುವರು. ಅಡ್ವ.ಹನೀಫ್ ಹುದವಿ ದೇಲಂಬಾಡಿ ಮುಖ್ಯ ಭಾಷಣ ಮಾಡುವರು. ಅಬೂಬಕರ್ ಸಅದಿ ಪೇರೂರು ಅಧ್ಯಕ್ಷತೆ ವಹಿಸುವರು. ಮುಹಮ್ಮದ್ ಕಾಶಿಫ್ ಮಿದ್ಲಾಜ್ ಖಿರಾಅತ್ ನೆರವೇರಿಸಲಿದ್ದಾರೆ. ಅಬ್ದುಲ್ಲಾ ಸಅದಿ ಅಟ್ಟ್ಟೆಗೋಳಿ,ಹುಸೈನಾರ್ ರಝ್ ವಿ, ಖಾದರ್ ಹಾಜಿ ಸಿ. ಮಾತನಾಡುವರು. ರಾತ್ರಿ 9:ಕ್ಕೆ ಜುಬೈರ್ ಮಾಸ್ತರ್ ತೊಟ್ಟಿಕಲ್ ಇಸ್ಲಾಮಿಕ್ ಕಥಾ ಉಪನ್ಯಾಸ ನೀಡಲಿದ್ದಾರೆ.
ಮುಂದಿನ ದಿನಗಳಲ್ಲಿ ನೌಫಲ್ ಸಖಾಫಿ ಕಳಸ, ಪೆರೋಡ್ ಅಬ್ದುಲ್ ರಹಿಮಾನ್ ಸಖಾಫಿ, ಕುಮ್ಮನಂ ನಿಜಾಮುದ್ದೀನ್ ಅಝ್ಹರಿ ಅಲ್ ಖಾಸಿಮಿ ಮತ್ತು ಇ.ಪಿ.ಅಬೂಬಕರ್ ಅಲ್ ಖಾಸಿಮಿ ಮುಖ್ಯ ಭಾಷಣ ಮಾಡಲಿದ್ದಾರೆ. 14ರಂದು ಬೆಳಗ್ಗೆ 10 ಕ್ಕೆ ಅತ್ತಾವುಲ್ಲಾ ತಂಙಳ್ ಉದ್ಯಾವರ ಅವರ ನೇತೃತ್ವದಲ್ಲಿ ಮೌಲಿದ್ ಪಾರಾಯಣ ನಡೆಯಲಿದೆ ಎಂದು ಮಾಹಿತಿ ನೀಡಿರುವರು.
ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಹಾಜಿ ಅಬ್ದುಲ್ಲಾ ಕುಂಞÂ ಫೈಝಿ ಮೂಸಾ ಮುಕ್ರಿ, ಸಂಚಾಲಕ ಅಬ್ದುಲ್ ಹಮೀದ್ ತೋಟ, ಖಾದರ್ ಹಾಜಿ ಸಿ.ಅಂಬಾರ್, ಮುಹಮ್ಮದ್ ಉಪ್ಪಳ ಗೇಟ್, ಅಬೂಬಕರ್ ಸಅದಿ ಹೇರೂರು, ಅಶ್ರಫ್, ಇಸ್ಮಾಯಿಲ್ ಉಪಸ್ಥಿತರಿದ್ದರು.