HEALTH TIPS

ಎಲ್ ನಿನೋ ಪರಿಣಾಮ, ದಕ್ಷಿಣ ಭಾರತದ ಮಳೆ ವ್ಯವಸ್ಥೆಯೇ ಬದಲು; ಹವಾಮಾನ ತಜ್ಞರ ಆತಂಕ

            ಬೆಂಗಳೂರು: ಕಳೆದ ವರ್ಷ ಎಲ್ ನಿನೋ ಪರಿಣಾಮದಿಂದಾಗಿ ದಕ್ಷಿಣ ಭಾರತದಲ್ಲಿನ ಮಳೆ ವ್ಯವಸ್ಥೆಯ ಸ್ವರೂಪವೇ ಬದಲಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

        ಕಳೆದ ವರ್ಷ, ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ 12 ವಾಯುಭಾರ ಕುಸಿತ ಪರಿಸ್ಥಿತಿಗಳು ರೂಪುಗೊಂಡಿದ್ದು, ಆದಾಗ್ಯೂ, ಎಲ್ ನಿನೊ ಪರಿಣಾಮದಿಂದಾಗಿ ಕರ್ನಾಟಕವು ಕಡಿಮೆ ಮಳೆಯನ್ನು ಕಂಡಿದೆ. ಏಕೆಂದರೆ ಈ ಎಲ್ ನಿನೋ ವ್ಯವಸ್ಥೆಗಳು ಭೂಮಿಯಿಂದ ಎಲ್ಲಾ ತೇವಾಂಶವನ್ನು ಹೀರಿಕೊಳ್ಳುತ್ತವೆ. 


       ಇದು ಈ ವರ್ಷ ಹವಾಮಾನ ತಜ್ಞರ ಗಮನವನ್ನು ಸೆಳೆಯಲಿಲ್ಲ. ಇದಕ್ಕೆ ಅರಬ್ಬಿ ಸಮುದ್ರದಲ್ಲಿ ರಚನೆಯಾಗುವ ವ್ಯವಸ್ಥೆಗಳ ಕಡಿಮೆ ಸಂಖ್ಯೆಯೂ ಕಾರಣವಾಗಿತ್ತು. ಮುಂಬರುವ ವರ್ಷಗಳಲ್ಲಿ, ಹವಾಮಾನ ಪರಿಸ್ಥಿತಿಗಳಿಂದಾಗಿ ಅರಬ್ಬಿ ಸಮುದ್ರದಲ್ಲಿ ಹೆಚ್ಚಿನ ವ್ಯವಸ್ಥೆಗಳು ರೂಪುಗೊಳ್ಳುತ್ತವೆ ಎಂದು ತಜ್ಞರು ಮುನ್ಸೂಚನೆ ನೀಡಿದ್ದು, ಇದು ಆತಂಕಕಾರಿ ವಿಷಯವಾಗಿದೆ ಎಂದು ಹೇಳಿದ್ದಾರೆ.

          

            ಭಾರತೀಯ ಹವಾಮಾನ ಇಲಾಖೆ (IMD) ಯ ಮಾಹಿತಿಯ ಪ್ರಕಾರ, 2023 ರಲ್ಲಿ 12 ಸಿನೊಪ್ಟಿಕ್ ಪ್ರಮಾಣದ ಅಡಚಣೆ (ವಾಯುಭಾರ ಕುಸಿತ)ಗಳನ್ನು ಕಂಡಿದೆ. ಈ ಪೈಕಿ ಮೂರು ಸಾಮಾನ್ಯ ವಾಯುಭಾರ ಕುಸಿತ, ಮೂರು ಪ್ರಬಲ ವಾಯುಭಾರ ಕುಸಿತ ಮತ್ತು ಒಂದು ಚಂಡಮಾರುತ, ಒಂದು ತೀವ್ರ ಚಂಡಮಾರುತ, ಒಂದು ಪ್ರಬಲ ಚಂಡಮಾರುತ ಮತ್ತು ಮೂರು ವಿಪರೀತ ಚಂಡಮಾರುತಗಳಾಗಿವೆ. ಕಳೆದ ವರ್ಷ ರೂಪುಗೊಂಡ ಆರು ಚಂಡಮಾರುತಗಳಲ್ಲಿ ಎರಡು ಅರಬ್ಬಿ ಸಮುದ್ರದಲ್ಲಿ ಮತ್ತು ನಾಲ್ಕು ಬಂಗಾಳ ಕೊಲ್ಲಿಯಲ್ಲಿ ರಚನೆಯಾಗಿವೆ ಎಂದು ಹವಮಾನ ಇಲಾಖೆ ಗಮನಿಸಿದೆ.

             ಪ್ರತೀ ವರ್ಷ ಬದಲಾವಣೆ
        2022 ರಲ್ಲಿ, ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದಲ್ಲಿ ವಾಯುಭಾರ ಕುಸಿತದ ತೀವ್ರತೆಯಿಂದಾಗಿ 10 ಚಂಡಮಾರುತಗಳು ಉಂಟಾಗಿವೆ. ಅವುಗಳಲ್ಲಿ ಒಂದು ಸೈಕ್ಲೋನಿಕ್ ಚಂಡಮಾರುತ ಮತ್ತು ಎರಡು ತೀವ್ರ ಚಂಡಮಾರುತಗಳಾಗಿವೆ. ಅರಬ್ಬಿ ಸಮುದ್ರದಲ್ಲಿ ಕಡಿಮೆ ಪ್ರಮಾಣದ ಚಂಡಮಾರುತಗಳು ಸೃಷ್ಟಿಯಾಗಿವೆ ಎಂದು ಐಎಂಡಿ ಅಧಿಕಾರಿಗಳು ತಿಳಿಸಿದ್ದಾರೆ. 2021 ರಲ್ಲಿ, ಇಂತಹ 10 ವ್ಯವಸ್ಥೆಗಳಿದ್ದವು, ಅವುಗಳಲ್ಲಿ ಒಂದು ಅತ್ಯಂತ ಪ್ರಬಲ ಚಂಡಮಾರುತ, ಒಂದು ಅತ್ಯಂತ ತೀವ್ರವಾದ ಚಂಡಮಾರುತ, ಒಂದು ಸಾಮಾನ್ಯ ಚಂಡಮಾರುತ ಮತ್ತು ಒಂದು ಸೈಕ್ಲೋನಿಕ್ ಚಂಡಮಾರುತವಾಗಿದ್ದವು.

              "2023 ರಲ್ಲಿ ವ್ಯವಸ್ಥೆಗಳ ತೀವ್ರತೆಯು ಹೆಚ್ಚು, ಆದರೆ ಆವರ್ತನವು ಕಡಿಮೆಯಾಗಿತ್ತು.. ವ್ಯವಸ್ಥೆಗಳ ರಚನೆಗೆ ಮುಖ್ಯ ಮಾನದಂಡವೆಂದರೆ ಸಮುದ್ರದ ಮೇಲ್ಮೈ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಮತ್ತು ಅದಕ್ಕಿಂತ ಹೆಚ್ಚಿನ ಏರಿಕೆಯಾದರೆ ಇದು ಚಂಡಮಾರುತದ ರಚನೆಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ, ಅರೇಬಿಯನ್ ಸಮುದ್ರಕ್ಕಿಂತ ಹೆಚ್ಚಿನ ವ್ಯವಸ್ಥೆಗಳು ಬಂಗಾಳ ಕೊಲ್ಲಿಯಲ್ಲಿ ರೂಪುಗೊಳ್ಳುತ್ತವೆ. ಏಕೆಂದರೆ ಇಲ್ಲಿ ಸೂರ್ಯನ ಶಾಖಕ್ಕೆ ಇಲ್ಲಿನ ಸಣ್ಣ ಪ್ರದೇಶ ಬಿಸಿಯಾಗುತ್ತದೆ. ಈ ವರ್ಷ, ಅರಬ್ಬಿ ಸಮುದ್ರದಲ್ಲಿ ರಚನೆಯಾಗುವ ವ್ಯವಸ್ಥೆಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ನಾವು ನೋಡಿದ್ದೇವೆ ಎಂದು ತಜ್ಞರೊಬ್ಬರು ಹೇಳಿದ್ದಾರೆ.

                  ತಾಪಮಾನ ಏರಿಕೆಯಿಂದ ಮಳೆ ವ್ಯವಸ್ಥೆ ಬದಲಾವಣೆ
        ಮುಂಬರುವ ದಿನಗಳಲ್ಲಿ, ಹವಾಮಾನ ಬದಲಾವಣೆಗಳಿಂದಾಗಿ ಅರಬ್ಬಿ ಸಮುದ್ರದಲ್ಲಿ ರಚನೆಯಾಗುವ ವ್ಯವಸ್ಥೆಗಳ ಸಂಖ್ಯೆಯು ಹೆಚ್ಚಾಗುತ್ತದೆ ಮತ್ತು ಭೂಮಿಯ ಮೇಲಿನ ಮಾನ್ಸೂನ್ ಮತ್ತು ಮಳೆಯ ಮಾದರಿಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಮಳೆ ವ್ಯವಸ್ಥೆಯನ್ನೇ ಬದಲಿಸಬಹುದು ಎಂದು ಹಿರಿಯ ಹವಾಮಾನ ಇಲಾಖೆ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

             ಸಮುದ್ರದ ಮೇಲ್ಮೈ ಕೂಡ ಹೆಚ್ಚಿನ ವೇಗದಲ್ಲಿ ಬೆಚ್ಚಗಾಗುತ್ತಿದೆ ಎಂದು ತಜ್ಞರು ಗಮನಸೆಳೆದಿದ್ದು, ಇದರಿಂದಾಗಿ ಸಮುದ್ರ ಮಟ್ಟ ಮತ್ತು ಪರಿಮಾಣವೂ ಏರುತ್ತಿದೆ. ಅರಬ್ಬಿ ಸಮುದ್ರದಲ್ಲಿ ಚಂಡಮಾರುತಗಳ ಆವರ್ತನವೂ ಹೆಚ್ಚಾಗಿದೆ. ಅಲೆಗಳ ಎತ್ತರವೂ ಹೆಚ್ಚುತ್ತಿದೆ, ಇದರಿಂದಾಗಿ ಕರಾವಳಿ ಪ್ರದೇಶಗಳು ಮತ್ತು ಜಲಚರಗಳ ಮೇಲೆ ಪರಿಣಾಮ ಬೀರುತ್ತಿವೆ. ಕರಾವಳಿ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಮಾನವ ಹಸ್ತಕ್ಷೇಪದಿಂದ ಮುಂಬರುವ ದಿನಗಳಲ್ಲಿ ಪರಿಸ್ಥಿತಿಗಳು ಇನ್ನಷ್ಟು ಹದಗೆಡುತ್ತವೆ. ಅಂತೆಯೇ ಚಂಡಮಾರುತ ರಚನೆಯಿಂದಾಗಿ ಮಾನ್ಸೂನ್ ಆರಂಭವು ವಿಳಂಬವಾಗಲಿದೆ ಮತ್ತು ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಮರುಕಳಿಸುತ್ತಲೇ ಇರುತ್ತದೆ ಎಂದು IMD ಅಧಿಕಾರಿಗಳು ಎಚ್ಚರಿಸಿದ್ದಾರೆ. 

                      ಕೇರಳಕರ್ನಾಟಕ ದ ಮೇಲೆ ಎಲ್ ನಿನೋ ಪರಿಣಾಮ

          ಚಂಡಮಾರುತಗಳ ರಚನೆ ಮತ್ತು ಎಲ್ ನಿನೊ ಪರಿಣಾಮವು ಮಾನ್ಸೂನ್ ಮೇಲೆ ಪರಿಣಾಮ ಬೀರಿತು. ಉತ್ತಮ ಮಾನ್ಸೂನ್‌ಗಾಗಿ, ಕರ್ನಾಟಕಕ್ಕೆ ಉತ್ತಮ ಗಾಳಿ ವಲಯ, ಮೇಲಿನ ವಾಯು ಚಂಡಮಾರುತದ ಪರಿಚಲನೆ ಮತ್ತು ಕಡಿಮೆ ಒತ್ತಡದ ಪ್ರದೇಶಗಳ ಅಗತ್ಯವಿದೆ. ಚಂಡಮಾರುತಗಳ ರಚನೆಯು ಕರ್ನಾಟಕದ ಕರಾವಳಿ ಪ್ರದೇಶಗಳು ಮತ್ತು ತಮಿಳುನಾಡು ಮತ್ತು ಕೇರಳದ ಮೇಲೆ ಪರಿಣಾಮ ಬೀರಿದೆ ಎಂದು ಅಧಿಕಾರಿ ಹೇಳಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries