ಮಂಜೇಶ್ವರ: ಅಯೋಧ್ಯನಗರಿಯಲ್ಲಿ ಜನವರಿ 22 ರಂದು ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವ ನಡೆಯಲ್ಲಿದ್ದು ಈ ಹಿನ್ನಲೆಯಲ್ಲಿ ಅಯೋಧ್ಯೆ ಶ್ರೀ ರಾಮ ಜನ್ಮ ಭೂಮಿಯಲ್ಲಿ ಪೂಜಿಸಿ ತಂದ ಮಂತ್ರಾಕ್ಷತೆಯನ್ನು ದೈಗೋಳಿ ಶ್ರೀ ರಾಮಕೃಷ್ಣ ಭಜನಾ ಮಂದಿರದ ಸದಸ್ಯರಿಂದ ಎಲ್ಲಾ ಹಿಂದೂಗಳ ಮನೆ ಮನೆಗೆ ತಲುಪಿಸುವ ಪುಣ್ಯ ಕಾರ್ಯಕ್ಕೆ ವಿದ್ವಾನ್ ರಾಮ ಭಟ್ ಬೋಳಂತಕೋಡಿ ಅವರು ಚಾಲನೆ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಂದಿರದ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಭಟ್ ಹಾಗೂ ಶಂಕರ ನಾರಾಯಣ ಭಟ್, ಹಿಂದೂ ಧಾರ್ಮಿಕ ಮುಖಂಡ ಸಂತೋಷ್ ಶೆಟ್ಟಿ ದೈಗೋಳಿ, ಲೀಲಾ ಮಯ್ಯ, ಯಶೋಧ ದೈಗೋಳಿ, ಮಾಧವ ಶೆಟ್ಟಿಗಾರ್ ದೈಗೋಳಿ, ಲಲಿತಾ ದೈಗೋಳಿ, ಜಯಶ್ರೀ ದೈಗೋಳಿ ಉಪಸ್ಥಿತರಿದ್ದರು.