ಪೆರ್ಲ: ಪೆರ್ಲದ ನೇತಾಜಿ ಸಾರ್ವಜನಿಕ ಗ್ರಂಥಾಲಯ ನೇತೃತ್ವದಲ್ಲಿ ರಂಗ ಡಿಂಡಿಮ ಕಾಸರಗೋಡು ಇದರ ಸಹಕಾರದೊಂದಿಗೆ ಮಂಗಳವಾರ ‘ಕನ್ನಡ ನಾಟಕ ಓದು’ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಗ್ರಂಥಾಲಯದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಗೋವಿಂದ ಪೈಗಳು ರಚಿಸಿದ ಚಿತ್ರಭಾನು ನಾಟಕವನ್ನು ಮಕ್ಕಳ ರಂಗ ನಿರ್ದೇಶಕ ಕೃಷ್ಣಪ್ಪ ಬಂಬಿಲ ವಾಚಿಸುವ ಮೂಲಕ ಚಾಲನೆ ನೀಡಿದರು. ನೇತಾಜಿ ಸಾರ್ವಜನಿಕ ಗ್ರಂಥಾಲಯದ ಅಧ್ಯಕ್ಷ ರಾಮಕೃಷ್ಣ ರೈ ಕುದ್ವ ಅಧ್ಯಕ್ಷತೆವಹಿಸಿದ್ದರು. ರಂಗ ನಿರ್ದೇಶಕ, ಜಿಲ್ಲಾ ಲೈಬ್ರರಿ ಕೌನ್ಸಿಲ್ ಸದಸ್ಯ ಉದಯ ಸಾರಂಗ್, ಬ್ಲಾಕ್ ಪಂ.ಮಾಜಿ ಸದಸ್ಯ ಪ್ರದೀಪ್ ಎಂ ಮುಖ್ಯ ಅತಿಥಿಗಳಾಗಿದ್ದರು. ವಿಶ್ವರಾಜ್ ಸ್ವಾಗತಿಸಿ ಅಂಕಿತಾ ವಂದಿಸಿದರು.