ಉಪ್ಪಳ: ದೇಶಿಯ ಅಧ್ಯಾಪಕ ಪರಿಷತ್ (ಎನ್.ಟಿ.ಯು) ಇದರ ಮಂಜೇಶ್ವರ ಉಪಜಿಲ್ಲಾ ಸಮ್ಮೇಳನ ಐಲ ಎಸ್.ಎಸ್.ಬಿ.ಎ. ಯು.ಪಿ ಶಾಲೆಯಲ್ಲಿ ಜರಗಿತು. ಉಪಜಿಲ್ಲಾ ಅಧ್ಯಕ್ಷೆ ಚಂದ್ರಿಕಾ.ಕೆ.ಆರ್ ಧ್ವಜಾರೋಹಣಗೈದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಉಪಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಕೆ.ಆರ್ ವಹಿಸಿದ್ದರು. ಸಹಕಾರ ಭಾರತಿಯ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ವಿಘ್ನೇಶ್ವರ ಕೆದುಕೋಡಿ ಅವರು ದೀಪ ಪ್ರಜ್ವಲನಗೈದು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ರಾಜ್ಯ ಕಾರ್ಯದರ್ಶಿ ಪ್ರಭಾಕರನ್ ನಾಯರ್, ರಾಜ್ಯ ಉಪಾಧ್ಯಕ್ಷ ವೆಂಕಪ್ಪ ಶೆಟ್ಟಿ, ಜಿಲ್ಲಾ ಕೋಶಾಧಿಕಾರಿ ಮಹಾಬಲ ಭಟ್, ವನಿತಾ ವಿಂಗ್ ರಾಜ್ಯ ಜೊತೆ ಕಾರ್ಯದರ್ಶಿ ಸುಚಿತಾ ಟೀಚರ್, ಐಲಾ ಶಾಲೆಯ ಹಿರಿಯ ಅಧ್ಯಾಪಕಿ ಅಮಿತ ಟೀಚರ್ ಶುಭ ಹಾರೈಸಿದರು. ಕಾರ್ಯಕ್ರಮವನ್ನು ಕಾರ್ಯದರ್ಶಿ ದಯಾನಂದ ಕುಬಣೂರು ಸ್ವಾಗತಿಸಿ, ರಘುವೀರ್ ರಾವ್ ವಂದಿಸಿದರು. ಕಾರ್ಯಕ್ರಮವನ್ನು ನಿಶಿತ್ ಐಲ ನಿರೂಪಿಸಿದರು.
ಬಳಿಕ ಜರಗಿದ ಸಂಘಟನಾ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಉಪಾಧ್ಯಕ್ಷ ಅರವಿಂದಾಕ್ಷ ಭಂಡಾರಿ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷ ವೆಂಕಪ್ಪ ಶೆಟ್ಟಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್, ಜಿಲ್ಲಾ ಸದಸ್ಯರಾದ ಸತೀಶ್ ಶೆಟ್ಟಿ ಒಡ್ಡಂಬೆಟ್ಟು, ಈಶ್ವರ ಕಿದೂರು ಮಾರ್ಗದರ್ಶನ ನೀಡಿದರು. ಉಪಜಿಲ್ಲಾ ಕಾರ್ಯದರ್ಶಿ ದಯಾನಂದ ಕುಬಣೂರು ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ರಘುವೀರ್ ರಾವ್ ಲೆಕ್ಕ ಪತ್ರ ಮಂಡಿಸಿದರು.ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.
ನೂತನ ಅಧ್ಯಕ್ಷೆಯಾಗಿ ಚಂದ್ರಿಕಾ ಟೀಚರ್,ಉಪಾಧ್ಯಕ್ಷರಾಗಿ ಶ್ರೀಧರ ಭಟ್ ಸಜಂಕಿಲ,ದಿನೇಶ್ ಕೊಡ್ಲಮೊಗರು, ಅಮಿತಾ ಐಲ,ಹರಿದಾಸ್ ಕುಬಣೂರು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ದೇವಿ ಪ್ರಸಾದ್ ಉಚ್ಚಿಲ್,ಜೊತೆ ಕಾರ್ಯದರ್ಶಿಯಾಗಿ ಮಮತಾ ಬಾಯರು, ಶಿವಪ್ರಸಾದ್ ಕಯ್ಯಾರು, ವಿನಿಶ್ ಐಲ,ಕಿಶೋರ್ ಕುಮಾರ್ ಬಂಬ್ರಾಣ ಹಾಗೂ ಕೋಶಾಧಿಕಾರಿಯಾಗಿ ರಘುವೀರ್ ರಾವ್ ಆಯ್ಕೆಗೊಂಡರು. ಕಾರ್ಯಕ್ರಮವನ್ನು ಕಾರ್ಯದರ್ಶಿ ದೇವಿಪ್ರಸಾದ್ ಉಚ್ಚಿಲ್ ಸ್ವಾಗತಿಸಿ,ವನಿತಾ ವಿಂಗ್ ಕಾರ್ಯದರ್ಶಿ ಮಮತಾ ಟೀಚರ್ ವಂದಿಸಿದರು.