HEALTH TIPS

ವಿದೇಶಿದಲ್ಲಿರುವ ಪತಿಯಿಂದ ತ್ರಿವಳಿ ತಲಾಖ್: ಮಹಿಳೆಯೊಬ್ಬರ ದೂರಿನ ಮೇರೆಗೆ ಪೋಲೀಸರಿಂದ ಪ್ರಕರಣ ದಾಖಲು

                  ಕೊಚ್ಚಿ: ತ್ರಿವಳಿ ತಲಾಖ್ ಆಧಾರದ ಮೇಲೆ ವಿಚ್ಛೇದನದ ವಿರುದ್ಧ ದೂರಿನ ಮೇರೆಗೆ ತ್ರಿಕ್ಕಾಕ್ಕರ ಪೋಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ, ಇದು ಕಾನೂನಿನಿಂದ ನಿಷೇಧಿಸಲ್ಪಟ್ಟಿದೆ.

               ಕೊಚ್ಚಿ ವಜಕಲ ಮೂಲದ ಮಹಿಳೆಯ ದೂರಿನ ಮೇರೆಗೆ ಆಕೆಯ ಪತಿ ಮತ್ತು ಅತ್ತೆಯ ವಿರುದ್ಧ ಪ್ರಕರಣ ದಾಖಲಾಗಿದೆ. ತ್ರಿವಳಿ ತಲಾಖ್ ಕಾನೂನಿನಡಿಯಲ್ಲಿ ಕೊಚ್ಚಿ ನಗರ ವ್ಯಾಪ್ತಿಯಲ್ಲಿ ತರಲಾದ ಮೊದಲ ಪ್ರಕರಣ ಇದಾಗಿದೆ.

            ದೂರಿನನ್ವಯ ಪೋಲೀಸರು ವಿವರವಾದ ತನಿಖೆ ನಡೆಸಿ ಮಹಿಳೆಯ ಪತಿ ಮತ್ತು ಅತ್ತೆ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವತಿಗೆ ಮಾನಸಿಕ ಹಿಂಸೆ ನೀಡಿದ ಪತಿ ಮತ್ತು ಅತ್ತೆಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಇತರ ಸೆಕ್ಷನ್‌ಗಳ ಜೊತೆಗೆ ತ್ರಿವಳಿ ತಲಾಖ್ ನಿಷೇಧ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.

              ತ್ರಿವಳಿ ತಲಾಖ್ ಅನ್ನು ಕಾನೂನಾತ್ಮಕವಾಗಿ ನಿಷೇಧಿಸಿದ ನಂತರವೂ ವಿದೇಶದಲ್ಲಿರುವ ತನ್ನ ಪತಿ ತ್ರಿವಳಿ ತಲಾಖ್ ಆಧಾರದ ಮೇಲೆ ತನ್ನನ್ನು ತೊರೆದು ತನ್ನ ಗಂಡನ ಕುಟುಂಬದಿAದ ಮಾನಸಿಕವಾಗಿ ಹಿಂಸಿಸಿದ್ದಾನೆ ಎಂದು ಮಹಿಳೆಯ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಹಿಳೆಯ ದೂರಿನ ಪ್ರಕಾರ, ತ್ರಿವಳಿ ತಲಾಖ್ ಹೇಳುವಂತೆ ಅತ್ತೆಯ ಒತ್ತಡಕ್ಕೆ ಪತಿ ಮಣಿದಿದ್ದಾನೆ.

               ಆಗಸ್ಟ್ ೧, ೨೦೧೯ ರಂದು ದೇಶದಲ್ಲಿ ತ್ರಿವಳಿ ತಲಾಖ್ ಅನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಲಾಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries