ಕೊಚ್ಚಿ: ಮಹಿಳಾ ಉದ್ಯೋಗಿಗಳ ವರ್ಗಾವಣೆಯಲ್ಲಿ ಉದ್ಯೋಗದಾತರ ಕಡೆಯಿಂದ ಅನುಕಂಪದ ಧೋರಣೆ ಇರಬೇಕು ಎಂದು ಹೈಕೋರ್ಟ್ ಹೇಳಿದೆ.
ಹೆಚ್ಚಿನ ಉದ್ಯೋಗಿಗಳು ಮಕ್ಕಳು ಮತ್ತು ವಯಸ್ಸಾದ ಪೋಷಕರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಅವರ ಬಗ್ಗೆ ಮುಕ್ತ ಮತ್ತು ಸಹಾನುಭೂತಿಯ ದೃಷ್ಟಿಕೋನದ ಅಗತ್ಯವಿದೆ ಎಂದು ನ್ಯಾಯಾಲಯವು ಸೂಚಿಸಿದೆ.
ಅಪರಿಚಿತ ಪರಿಸ್ಥಿತಿಯಲ್ಲಿ ಕೆಲಸ ಮತ್ತು ಜೀವನವನ್ನು ಮುಂದುವರಿಸಲು ಮಹಿಳೆಯರಿಗೆ ಕಷ್ಟವಾಗುತ್ತದೆ. ಮಕ್ಕಳನ್ನು ರಕ್ಷಿಸುವಲ್ಲಿ ಮತ್ತು ಅನಾರೋಗ್ಯದ ಪೆÇೀಷಕರನ್ನು ನೋಡಿಕೊಳ್ಳುವಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಾರೆ. ಹಠಾತ್ ಜೀವನವನ್ನು ಬೇರೆಡೆಗೆ ಸ್ಥಳಾಂತರಿಸುವುದು ಅವರ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರಬಹುದು ಎಂದು ನ್ಯಾಯಾಲಯ ಪರಿಗಣಿಸಿದೆ.
ಕೊಚ್ಚಿ ಉದ್ಯೋಗಮಂಡಲ್ ಇಎಸ್ಐ ಆಸ್ಪತ್ರೆಯಿಂದ ಕೊಲ್ಲಂ ಆಶ್ರಮ ಇಎಸ್ಐ ಆಸ್ಪತ್ರೆಗೆ ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿ ಇಬ್ಬರು ಮಹಿಳಾ ವೈದ್ಯರು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸುವಾಗ ನ್ಯಾಯಾಲಯದ ಈ ಹೇಳಿಕೆ ಹೊರಬಿದ್ದಿದೆ. ನ್ಯಾಯಮೂರ್ತಿಗಳಾದ ಎ ಮಹಮ್ಮದ್ ಮುಷ್ತಾಕ್ ಮತ್ತು ಶೋಭಾ ಅನ್ನಮ್ಮ ಈಪನ್ ಅವರನ್ನೊಳಗೊಂಡ ವಿಭಾಗೀಯ ಪೀಠ ಇದನ್ನು ಸ್ಪಷ್ಟಪಡಿಸಿದೆ. ತೀರ್ಪಿನ ಆಧಾರದ ಮೇಲೆ ಅರ್ಜಿಗಳನ್ನು ನಿರ್ಧರಿಸಲು ನ್ಯಾಯಮಂಡಳಿ ಸೂಚಿಸಿದೆ.





