HEALTH TIPS

ದೇವರ ನಾಡಿಗೆ ಆಗಮಿಸಿದ ಪ್ರಧಾನಿಗೆ ಭವ್ಯ ಸ್ವಾಗತ

               ತ್ರಿಶೂರ್: ದೇವರು ನಾಡು ಕೇರಳಕ್ಕೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರಮೋದಿ ಅವರನ್ನು ನೋಡಲು ವಡಕ್ಕುಮನಾಥನ ನಾಡಲ್ಲಿ ಸಾವಿರಾರು ಜನರು ನೆರೆದಿದ್ದರು..

           ತೇಕಿಂಕಾಡ್ ಮೈದಾನದಲ್ಲಿ ಸುಮಾರು 200,000 ಮಹಿಳೆಯರು ಪ್ರಧಾನಿಯವರ ಆಗಮನಕ್ಕಾಗಿ ಕಾತರದಿಂದ ಆಗಮಿಸಿದ್ದರು. 

              ಜಿಲ್ಲಾ ಆಸ್ಪತ್ರೆಯಿಂದ ಆರಂಭವಾದ  ಪ್ರಧಾನಿ ರೋಡ್ ಶೋ ವೀಕ್ಷಿಸಲು ಹಾಗೂ ಶುಭಾಶಯ ಕೋರಲು ಸಹಸ್ರಾರು ಜನರು ನೆರೆದಿದ್ದರು. ಮಕ್ಕಳು, ಮಹಿಳೆಯರು ಮತ್ತು ಹಿರಿಯರು ರಸ್ತೆಯ ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಿಂತಿದ್ದರು.

              ಕೇರಳಕ್ಕೆ ಆಗಮಿಸಿದ ಪ್ರಧಾನಿಯನ್ನು ತ್ರಿಶೂರ್ ಕಲೆಕ್ಟರ್ ವಿ.ಆರ್.ಕೃಷ್ಣ ತೇಜ ಬರಮಾಡಿಕೊಂಡರು. ಜಿಲ್ಲಾ ಆಸ್ಪತ್ರೆಯಿಂದ ಒಂದೂವರೆ ಕಿಲೋಮೀಟರ್ ದೂರದ ವರೆಗೆ ಪ್ರಧಾನಿಯವರ ರೋಡ್ ಶೋ ನಡೆಯಿತು. ತೆಕ್ಕೇ ಗೋಪುರನಾಡ್, ಮಣಿಕಂಠನಾಳ, ನಟುವಿಲಾಲ್ ಮೂಲಕ ಒಂದೂವರೆ ಕಿಲೋಮೀಟರ್ ಕ್ರಮಿಸಿ ತೇಕಿಂಕಾಡ್ ಮೈದಾನದ ಸಮ್ಮೇಳನ ಸ್ಥಳಕ್ಕೆ ತಲುಪಿದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries