HEALTH TIPS

ಗಣರಾಜ್ಯೋತ್ಸವಕ್ಕೆ ದೆಹಲಿಗೆ ತೆರಳಲಿರುವ ರಾಜಪ್ಪನ್

                ಕೈಪುಳಮುಟ್ (ಕೊಟ್ಟಾಯಂ): ರಾಜಪ್ಪನ್ ಎಂಬೊಬ್ಬ ಸಾಧಕನಿಗೆ ಗಣರಾಜ್ಯೋತ್ಸವ ಸಮಾರಂಭದಲ್ಲಿ ದೆಹಲಿಯಲ್ಲಿ ಭಾಗವಹಿಸುವ ಅವಕಾಶ ವಿಶೇಷವಾಗಿ ಕೂಡಿಬಂದಿದೆ.

               ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ಮೂಲಕ ಉದಾಹರಿಸಿದ್ದ ಸಾಧಕ ಈ ರಾಜಪ್ಪನ್. ಅರ್ಪುಕರ ಪಂಚಾಯತ್ ಮಂಚಟಿಕಾರಿ ನಿವಾಸಿ ರಾಜಪ್ಪನವರಿಗೆ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಹಾಗೂ ಪ್ರಧಾನಿಯವರನ್ನು ಖುದ್ದು ಭೇಟಿಯಾಗುವಂತೆ ಆಹ್ವಾನ ಬಂದಿದೆ.

               ವಿಕಲಚೇತನರಾದ ರಾಜಪಪ್ಪನ್ ಅವರು ದೋಣಿಯಲ್ಲಿ ಪ್ರಯಾಣಿಸಿ ವೆಂಬನಾಟು ಹಿನ್ನೀರಿನಿಂದ ಪ್ಲಾಸ್ಟಿಕ್ ಬಾಟಲಿಗಳನ್ನು ಹೆಕ್ಕುವ ಮೂಲಕ ಜೀವನ ಸಾಗಿಸುವವರು. ಮತ್ತು ಇದು ಪ್ರಕೃತಿ ಸಂರಕ್ಷಣೆಯಾಗಿ ಗುರುತಿಸಲ್ಪಟ್ಟಿತು. ಪ್ರಧಾನಿಯವರ ಮನ್ ಕಿ ಬಾತ್‍ನೊಂದಿಗೆ ಗಮನ ಸೆಳೆದ ನಂತರ, ಅವರು ಮನೆ ಮತ್ತು ದೋಣಿ ಸೇರಿದಂತೆ ಅನೇಕ ಉಪಕಾರಗಳನ್ನು ಪಡೆದರು. ಮಾಜಿ ಪಂಚಾಯತ್ ಸದಸ್ಯ ಅಡ್ವ. ಜೋಶಿ ಚೀಪುಂಕಲ್ ಅವರೊಂದಿಗೆ ರಾಜಪ್ಪನ್ ಅವರು ದೆಹಲಿಗೆ ತೆರಳಲಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries