HEALTH TIPS

ಮುಳಿಯಾರ್ ಗೋಳಿಯಡ್ಕ: ಬ್ರಹ್ಮಕಲಶೋತ್ಸವ ಸಮಿತಿ ರೂಪೀಕರಣ ಸಭೆ

              ಮುಳ್ಳೇರಿಯ: ಅಧೈತ ಭಾವದಲ್ಲಿ ಭಗವತ್ಸೇವೆ ಮಾಡಿದಾಗ ಫಲಪ್ರಾಪ್ತಿಯಾಗುತ್ತದೆ   ಎಂದು ಉದ್ಯಮಿ, ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ  ಹೇಳಿದರು.

                ಮುಳಿಯಾರಿನ ಗೋಳಿಯಡ್ಕ ಶ್ರೀ ವೆಂಕಟ್ರಮಣ ಆದಿಭೈರವ ಅಮ್ಮನವರ್ ಕ್ಷೇತ್ರ ನವೀಕರಣ ಪ್ರತಿಷ್ಠಾ ಮಹೋತ್ಸವವು ಏಪ್ರಿಲ್ 26 ರಂದು ನಡೆಯಲಿದ್ದು ಸಮಾರಂಭವನ್ನು ಯಶಸ್ವಿಯಾಗಿ ಆಚರಿಸಲು ಬ್ರಹ್ಮಕಲಶೋತ್ಸವ ಸಮಿತಿ ರೂಪೀಕರಣ ಸಭೆಯ ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿದ್ದು ಮಾತನಾಡಿದರು.     

          ಸಭೆಯಲ್ಲಿ ವಾಮನ ಆಚಾರ್ಯ ಅಧ್ಯಕ್ಷತೆ ವಹಿಸಿ ಬ್ರಹ್ಮಕಲಶೋತ್ಸವದ ಸಮಗ್ರ ಮಾಹಿತಿಗಳನ್ನಿತ್ತರು.

               ಅಬ್ಬಾಸ್ ಕೊಲ್ಚಪ್ಪೆ, ಮನ್ಸೂರ್, ಮಣಿಕಂಠನ್ ಒಂಬೆಯಿಲ್, ಕರುಣಾಕರನ್ ಮಾಸ್ತರ್, ಕುಂಞಂಬು ನಂಬಿಯಾರ್, ಶಶಿ ಅಮ್ಮಂಗೋಡು, ಮೋಹನ ಅಮ್ಮಂಗೋಡು, ಪ್ರಭಾಕರ ನಾಯರ್, ರಮೇಶ ಮೊದಲಪ್ಪಾರ, ಸದಾಶಿವ ಭಟ್, ಶರೀಫ್ ಕೊಡವಂಜಿ, ಮಧು ಕೋಡಿ, ಬಾಬು ಪರವನಡ್ಕ, ಕೃಷ್ಣ ನೆಕ್ರಾಜೆ, ಅರ್ಜುನ್ ತಾಯಲಂಗಾಡಿ ಉಪಸ್ಥಿತರಿದ್ದು  ಶುಭಹಾರೈಸಿದರು. 

             ಸಭೆಯಲ್ಲಿ ವಿವಿಧ ಸಮಿತಿಗಳನ್ನು ರೂಪೀಕರಿಸಲಾಯಿತು.  ಶ್ರೀಮದ್ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು, ಬ್ರಹ್ಮಶ್ರೀ ರವೀಶ್ ತಂತ್ರಿ ಕುಂಟಾರು, ವಿಷ್ಣು ಭಟ್ ಐಲಕುಂಜೆ, ಅಪ್ಪುಟ್ಟ ಗೋಳಿಯಡ್ಕ ಇವರನ್ನು ಪೋಷಕರನ್ನಾಗಿ, ಗೌರವಾಧ್ಯಕ್ಷರಾಗಿ  ವಸಂತ ಪೈ ಬದಿಯಡ್ಕ, ಅಧ್ಯಕ್ಷರಾಗಿ ನವೀನ ಭಟ್ ಕುಂಜಿರ್ಕಾನ, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಗೋಳಿಯಡ್ಕ ಇವರನ್ನೊಳಗೊಂಡ ಪ್ರಧಾನ ಸಮಿತಿ, ಮತ್ತು ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು.

              ಸಮಿತಿಗಳ ಕಾರ್ಯವಿಧಾನಗಳ ಬಗ್ಗೆ ಗೋವಿಂದ ಬಳ್ಳಮೂಲೆ ಮಾಹಿತಿಗಳನ್ನಿತ್ತರು. ಕಾರ್ಯದರ್ಶಿ ರಾಧಾಕೃಷ್ಣ  ಗೋಳಿಯಡ್ಕ ಪ್ರಸ್ತಾಬಿಕವಾಗಿ ಮಾತನಾಡಿ ಸ್ವಾಗತಿಸಿ, ರಾಘವ ಪೆರಾಜೆ ವಂದಿಸಿದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries