ಮಂಜೇಶ್ವರ: ಮೀಂಜ ಕುಳೂರು ಗ್ರಾಮದ ಸಂತಡ್ಕ ಶ್ರೀ ಅರಸು ಸಂಕಲ ದೈವ ಕ್ಷೇತ್ರದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಮತ್ತು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಇವರ ದಿವ್ಯ ಉಪಸ್ಥಿತಿಯಲ್ಲಿ ತಂತ್ರಿವರ್ಯ ಕುಡುಪು ಬ್ರಹ್ಮಶ್ರೀ ವೇದಮೂರ್ತಿ ನರಸಿಂಹ ತಂತ್ರಿಗಳು ಮತ್ತು ಯೋಗೀಶ ಕಲ್ಯಾಣತ್ತಾಯ ಇವರ ಮಾರ್ಗದರ್ಶನದಲ್ಲಿ 'ಶ್ರೀಮದ್ಭಾಗವತ ಸಪ್ತಾಹ ಯಜ್ಞ -ಶ್ರೀ ಕೃಷ್ಣೋತ್ಸವ, ತೊಟ್ಟಿಲು ಉತ್ಸವಶ್ರೀ ತೊಟ್ಟಿಲು ಉತ್ಸವ, ಶ್ರೀ ಕೃಷ್ಣ ರುಕ್ಮಿಣಿ ಕಲ್ಯಾಣೋತ್ಸವ, ಅವಭೃತೋತ್ಸವ ಕಾರ್ಯಕ್ರಮಗಳು ಮಾ. 11 ರಿಂದ 17. ರವರೆಗೆ ಜರಗಲಿರುವುದು. ಡಾ ಶ್ರೀಧರ ಭಟ್ ಉಪ್ಪಳ ಇವರ ಅಧ್ಯಕ್ಷತೆಯಲ್ಲಿ ಬ್ರಹ್ಮ ಶ್ರೀ ವೇದಮೂರ್ತಿ ಪರಕ್ಕಜೆ ಅನಂತನಾರಾಯಣ ಭಟ್ಟರ ನೇತೃತ್ವದಲ್ಲಿ ಈ ಸಮಾರಂಭ ಒಂದು ವಾರಗಳ ಕಾಲ ನಡೆಯಲಿದ್ದು ಸದ್ಭಕ್ತ ಬಂಧುಗಳು ಪಾಲ್ಗೊಳ್ಳಬೇಕೆಂದು ವಿನಂತಿಸಲಾಗಿದೆ.