HEALTH TIPS

ವಿದ್ಯುದಾಘಾತ: 14 ಮಕ್ಕಳಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

             ಕೋ: ಶಿವರಾತ್ರಿ ಸಂದರ್ಭದಲ್ಲಿ ಶುಕ್ರವಾರ 'ಶಿವ ಭಾರತ' ಮೆರವಣಿಗೆಯಲ್ಲಿ ಸಾಗುತ್ತಿದ್ದಾಗ ವಿದ್ಯುದಾಘಾತದಿಂದ 14 ಮಕ್ಕಳು ಗಾಯಗೊಂಡಿದ್ದಾರೆ. ಇವರಲ್ಲಿ ಇಬ್ಬರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

                ಹತ್ತರಿಂದ ಹದಿನಾರು ವರ್ಷ ವಯಸ್ಸಿನ ಮಕ್ಕಳು ಕುನ್ಹಾರಿ ಪೊಲೀಸ್‌ ಠಾಣೆಯ ವ್ಯಾಪ್ತಿಯ ಪ್ರದೇಶದಲ್ಲಿ ಶುಕ್ರವಾರ ಮಧ್ಯಾಹ್ನ ಮೆರವಣಿಗೆಯಲ್ಲಿ ಸಾಗುತ್ತಿದ್ದರು.

             22 ಅಡಿ ಉದ್ದದ ಕಬ್ಬಿಣದ ಧ್ವಜಕಂಬವನ್ನು ಬಾಲಕನೊಬ್ಬ ಹಿಡಿದಿದ್ದ. ಆ ಧ್ವಜದ ಮೇಲ್ಭಾಗವು ಹೈ ಟೆನ್ಷನ್‌ ತಂತಿಗೆ ತಗುಲಿದ್ದೇ ವಿದ್ಯುದಾಘಾತವಾಯಿತು. ಆ ಬಾಲಕನಿಗೆ ಶೇ 100ರಷ್ಟು ಸುಟ್ಟಗಾಯಗಳಾಗಿವೆ. ಅವನನ್ನು ಪಾರು ಮಾಡಲು ಯತ್ನಿಸಿದ ಇನ್ನೊಬ್ಬ ಬಾಲಕನಿಗೆ ಶೇ 50ರಷ್ಟು ಸುಟ್ಟಗಾಯಗಳು ಉಂಟಾಗಿವೆ. ಉಳಿದ 12 ಮಕ್ಕಳಿಗೆ ಶೇ 50ಕ್ಕಿಂತ ಕಡಿಮೆ ಗಾಯಗಳಾಗಿವೆ ಎಂದು ಕೋಟದ ಪೊಲೀಸ್ ವರಿಷ್ಠಾಧಿಕಾರಿ ಅಮೃತಾ ದುಹಾನ್ ತಿಳಿಸಿದರು.

ಗಾಯಗೊಂಡವರನ್ನೆಲ್ಲ ಎಂಬಿಎಸ್‌ ಆಸ್ಪತ್ರೆಗೆ ಸೇರಿಸಲಾಗಿದೆ.


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries