ಕಾಸರಗೋಡು: ಹೊಸದುರ್ಗ ಕಾರಾಗೃಹದಲ್ಲಿರುವ ಕೈದಿಗಳು ಬಾಯಾರಿದ ಪಕ್ಷಿಗಳಿಗೆ ಹಾಗೂ ಇತರ ಪ್ರಾಣಿಗಳಿಗೆ ಬಿಸಿಲಿನ ತಾಪದಿಂದ ಪಾರಾಗಲು ನೀರು ಒದಗಿಸುವ ಮೂಲಕ ತಮ್ಮ ಪ್ರಾಣಿ ಸ್ನೇಹ ತೋರ್ಪಡಿಸಿದ್ದಾರೆ. ಜೈಲಿನ ಕೈದಿಗಳು ಕೈದಿಗಳು ತಮ್ಮ ಕೆಲಸದ ಭಾಗವಾಗಿ ತಯಾರಿಸಿದ 10 ಕಂಟೈನರ್ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಈ ಮೂಲಕ ಹೊಸದುರ್ಗ ಕಾರಾಗೃಹ ಬೇಸಿಗೆಯ ಬೇಗೆಯಲ್ಲಿ ನೀರಿಗಾಗಿ ಹಾತೊರೆಯುವ ಪಕ್ಷಿಗಳು, ಗುಬ್ಬಚ್ಚಿಗಳು ಮತ್ತು ಅಳಿಲುಗಳಿಗೆ ಕುಡಿಯುವ ನೀರನ್ನು ಒದಗಿಸುವ ಆಶ್ರಯ ತಾಣವಾಗಿ ಬದಲಾಗಿದೆ.
ಜಿಲ್ಲಾ ಕಾರಾಗೃಹದ ಕೈದಿಗಳು ನಿರ್ಮಿಸಿದ ನೀರಿನ ಟ್ಯಾಂಕ್ಗಳ ಉದ್ಘಾಟನೆಯನ್ನು ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂಧನ್ ನೆರವೇರಿಸಿದರು. ಕಾರಾಗೃಹ ಅಧೀಕ್ಷಕ ಕೆ.ವೇಣು ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಕಾರಾಗೃಹ ಅಧಿಕಾರಿ ಯು.ಜಯಾನಂದನ್ ಸ್ವಾಗತಿಸಿದರು. ಮಹಿಳಾ ಸಹಾಯಕ ಅಧೀಕ್ಷಕಿ ಗ್ರೇಡ್-2 ಟಿ.ವಿ.ಸುಮಾ, ಉಪ ಕಾರಾಗೃಹ ಅಧಿಕಾರಿ ಎ.ವಿ.ಪ್ರಮೋದ್, ಎಂ.ವಿ.ಸಂತೋಷ್ ಕಮಾರ್, ಸಹಾಯಕ.ಕಾರಾಗೃಹ ಅಧಿಕಾರಿ ಪಿ.ವಿ.ವಿವೇಕ್, ಟಿ.ಪ್ರತೀಶ್ ಮೋಹನನ್, ಪಿ.ವಿ.ವಿಪಿನ್, ಟಿ.ರಾಜನ್, ವಿನೀತ್ ವಿ. ಪಿಳ್ಳೈ ಕೂಡ ಉಪಸ್ಥಿತರಿದ್ದರು. ಜೈಲಿನಲ್ಲಿ ನಾಲ್ಕು ವರ್ಷಗಳಿಂದ ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸುತ್ತಿದ್ದರೂ ಇದೇ ಮೊದಲ ಬಾರಿಗೆ ಕೈದಿಗಳೇ ತಯಾರಿಸಿದ ದೊಡ್ಡ ಕಂಟೈನರ್ ಗಳಲ್ಲಿ ಪಕ್ಷಿಗಳಿಗೆ ಕುಡಿಯಲು ನೀರು ಒದಗಿಸಲಾಗುತ್ತಿದೆ.




