HEALTH TIPS

ಮುಖ್ಯಮಂತ್ರಿ ವಿರುದ್ಧ ಎಫ್‍ಬಿ ಪೋಸ್ಟ್: ಆರೋಪಿಗಳು ತಪ್ಪಿತಸ್ಥರಲ್ಲ ಎಂದ ನ್ಯಾಯಾಲಯ

                    ತಾಮರಶ್ಶೇರಿ: ಮುಖ್ಯಮಂತ್ರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ 73 ವರ್ಷದ ಮಹಿಳೆ ಸೇರಿದಂತೆ ಇಬ್ಬರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

                 ಮುಕ್ಕಂನ 73 ವರ್ಷದ ಎನ್.ಸಿ. ಇಂದಿರಾ, ಪೆರಿಂದಲ್ಮಣ್ಣದ ಶಿಕ್ಷಕ ದಿನೇಶ್ ಬಾಬು ಅವರನ್ನು ದೋಷಮುಕ್ತಗೊಳಿಸಲಾಗಿದೆ.

                  ಹಿಂದೂ ಐಕ್ಯವೇದಿ ರಾಜ್ಯಾಧ್ಯಕ್ಷೆ ಕೆ.ಪಿ. ಶಶಿಕಲಾ ಟೀಚರ್ ಬಂಧನದ ನಂತರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ದ ಫೇಸ್ ಬುಕ್ ಪೋಸ್ಟ್ ಮಾಡಿದ್ದರು. ಅಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಆಪ್ತ ಕಾರ್ಯದರ್ಶಿ ಎಂ.ವಿ. ಜಯರಾಜನ್ ಅವರು ದೂರು ದಾಖಲಿಸಿದ್ದರು.

                ವಿಚಾರಣೆಯ ಕೊನೆಯಲ್ಲಿ, ಡಿಜಿಪಿ, ತಾಮರಸ್ಸೆರಿ ಜುಡಿಶಿಯಲ್À ಅವರ ಸೂಚನೆಯಂತೆ ಅಪರಾಧ ವಿಭಾಗದವರು ಪ್ರಕರಣ ದಾಖಲಿಸಿದ್ದಾರೆ. ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಆದ್ರ್ರಾ ನಿತಿನ್ ಅವರು ಆರೋಪಿಗಳನ್ನು ನಿರಪರಾಧಿ ಎಂದು ಘೋಷಿಸಿ ನಿನ್ನೆ ಅವರನ್ನು ಖುಲಾಸೆಗೊಳಿಸಿದ್ದಾರೆ. ನ್ಯಾಯಾಲಯದಲ್ಲಿ ಎಂ.ವಿ. ಜಯರಾಜನ್ ಅವರನ್ನು ಪ್ರಾಸಿಕ್ಯೂಷನ್ ಸಾಕ್ಷಿಯಾಗಿ ವಿಚಾರಣೆ ನಡೆಸಲಾಯಿತು. ಆರೋಪಿಗಳಿಗೆ ಅಡ್ವ. ಎ. ಪ್ರತೀಶ್ ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries