ಪೆರ್ಲ: ಪೆರ್ಲ ನಾಲಂದ ಕಾಲೇಜು ಭೂಮಿತ್ರಸೇನ ಕ್ಲಬ್ ಮತ್ತು ಎನ್ನೆಸ್ಸೆಸ್ ಘಟಕ ಸಂಖ್ಯೆ 49 ಜಂಟಿ ಆಶ್ರಯದಲ್ಲಿ ಗುರುವಾರ ವಿಶ್ವ ಅರಣ್ಯ ದಿನ ಆಚರಿಸಲಾಯಿತು.
ಎನ್ನೆಸ್ಸೆಸ್ ಯೋಜನಾಧಿಕಾರಿ ಕಾವ್ಯ ಚಂದ್ರನ್ ಅಧ್ಯಕ್ಷತೆಯಲ್ಲಿ ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಲಯಾಳಂ ಸಹ ಪ್ರಾಧ್ಯಾಪಕಿ ವಿನೀಶಾ ಎಸ್.ವಿ. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ಪ್ರಕೃತಿ ಸಮತೋಲನದಲ್ಲಿ ಅರಣ್ಯದ ಮಹತ್ವ ಹಾಗೂ ಈ ವರ್ಷದ ಥೀಮ್ "ಅರಣ್ಯಗಳು ಮತ್ತು ನಾವೀನ್ಯತೆ- ಉತ್ತಮ ಪ್ರಪಂಚಕ್ಕಾಗಿ ಹೊಸ ಪರಿಹಾರಗಳು" ವಿಷಯ ಬಗ್ಗೆ ವಿವರಿಸಿದರು.
ಭೂಮಿತ್ರಸೇನಾ ಕ್ಲಬ್ ಸಂಯೋಜಕ ಮನೋಜ್ ಕುಮಾರ್ ಮಾತನಾಡಿ, ಪರಿಸರ ನಾಶಕ್ಕೆ ಕಾರಣವಾಗುವ ಮಾನವ ಚಟುವಟಿಕೆಗಳ ಬಗ್ಗೆ ತಿಳಿಸಿದರು. ಮಹೇಶ ಪ್ರಸ್ತಾವಿಕವಾಗಿ ಮಾತನಾಡಿದರು. ಎನ್ನೆಸ್ಸೆಸ್ ಸ್ವಯಂ ಸೇವಕಿ ಮನೀಷಾ ಜೆ.ಬಿ.ಸ್ವಾಗತಿಸಿದರು. ಅರ್ಚನಾ ಕೆ. ನಿರೂಪಿಸಿದರು.