HEALTH TIPS

ಕಾನೂನು ನೆರವು ಕೋರಿದ ಯುವತಿ ಮೇಲೆ ಅತ್ಯಾಚಾರ ಪ್ರಕರಣ; ಮಾಜಿ ಸರ್ಕಾರಿ ವಕೀಲ ಪಿಜಿ ಮನುಗೆ ಜಾಮೀನು

                   ಎರ್ನಾಕುಳಂ: ಕಾನೂನು ನೆರವು ಕೋರಿದ ಯುವತಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸರ್ಕಾರಿ ವಕೀಲ ಪಿಜಿ ಮನುವಿಗೆ ಜಾಮೀನು ಮಂಜೂರು ಮಾಡಲಾಗಿದೆ. 

               ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.ಪ್ರಕರಣದ ವಿಚಾರಣೆ ಮುಗಿಯುವವರೆಗೆ ಚೋಟಾನಿಕರ ಠಾಣಾ ವ್ಯಾಪ್ತಿಯಲ್ಲಿ  ಪ್ರವೇಶಿಸಬಾರದು, ಪಾಸ್ ಪೋರ್ಟ್ ಹಾಜರುಪಡಿಸುವುದು, ಪ್ರತಿ ತಿಂಗಳ ಮೊದಲ ಶನಿವಾರ ತನಿಖಾಧಿಕಾರಿ ಮುಂದೆ ಹಾಜರಾಗುವುದು ಎಂಬ ಷರತ್ತುಗಳು ಎರಡು ಲಕ್ಷ ರೂ. ಬಾಂಡ್ ಮತ್ತು ಇಬ್ಬರು ಜಾಮೀನುದಾರರ ಮೇಲೆ ಜಾಮೀನು ನೀಡಲಾಗಿದೆ. ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಚಾರ್ಜ್ ಶೀಟ್ ಸಲ್ಲಿಸಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.

                    ಇನ್ನೊಂದು ಪ್ರಕರಣದಲ್ಲಿ ಕಾನೂನು ಸಲಹೆಗೆಂದು ಪೋಷಕರೊಂದಿಗೆ ಬಂದಿದ್ದ ಬಾಲಕಿಗೆ ಕಡವಂತ್ರದಲ್ಲಿರುವ ಕಚೇರಿ ಹಾಗೂ ಬಾಲಕಿಯ ಮನೆಯಲ್ಲಿ ಬೆದರಿಸಿ ಕಿರುಕುಳ  ನೀಡಿದ್ದಾರೆ ಎಂಬ ದೂರು ದಾಖಲಾಗಿದ್ದು, ಕಳೆದ ನ.29ರಂದು ಚೋಟಾನಿಕರ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

             ಅನುಮತಿಯಿಲ್ಲದೆ ಯುವತಿಯ ಖಾಸಗಿ ಚಿತ್ರ ತೆಗೆದು ಆಕೆಯ ಪೋನ್‍ಗೆ ಅಶ್ಲೀಲ ಸಂದೇಶ ಕಳುಹಿಸಿದ್ದಕ್ಕಾಗಿ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ದಾಖಲಾದ ನಂತರ ಮನು ಅವರು ಹೈಕೋರ್ಟ್‍ನ ಹಿರಿಯ ಸರ್ಕಾರಿ ವಾದಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries