ಮಂಜೇಶ್ವರ: ದೇಶದಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದು ಶತಸಿದ್ದ. ಅದು ದೇಶದ ಜನತೆಯ ವಿಶ್ವಾಸದ ಆಯ್ಕೆಯಾಗಲಿದೆ. ಎಡರಂಗ ಮತ್ತು ಕಾಂಗ್ರೆಸ್ ಗೆ ಅಭಿವೃದ್ಧಿಯ ಹೆಸರಲ್ಲಿ ಮತ ಪಡೆಯಲು ಸಾಧ್ಯವಿಲ್ಲ.ಭ್ರಷ್ಟಾಚಾರ ಈ ಎರಡೂ ಪಕ್ಷಗಳ ಮುಖ ಮುದ್ರೆ. ದೇಶದಲ್ಲಿ ಎಡರಂಗ ಮತ್ತು ಕಾಂಗ್ರೆಸ್ ಮಾಡಿರುವ ಇಂಡಿಯಾ ಒಕ್ಕೂಟ ಕೇರಳದಲ್ಲೇ ರಾಹುಲ್ ಗಾಂಧಿ ಸ್ಪರ್ಧಿಸುವ ಲೋಕಸಭಾ ಕ್ಷೇತ್ರದಲ್ಲೇ ಸಾಧ್ಯವಾಗುತ್ತಿಲ್ಲ. ಕೇರಳದ ಹೊರಗೆ ಸೀತಾರಾಮ ಯಚೂರಿಯ ಕೈ ಹಿಡಿದೇ ಪ್ರಚಾರ ಮಾಡುವ ರಾಹುಲ್, ತಾನು ಸ್ಪರ್ಧಿಸುವ ಕ್ಷೇತ್ರದಲ್ಲಿ ಎಡರಂಗ ಅಭ್ಯರ್ಥಿ ಎದುರಾಳಿಯಾಗಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಹೇಳಿದರು.
ವರ್ಕಾಡಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ವರ್ಕಾಡಿ ನಿವಾಸಿಗೆ ಈ ಬಾರಿ ಬಿಜೆಪಿ ಗುರುತಿಸಿ ಅಭ್ಯರ್ಥಿ ಮಾಡಿರುವುದು ನಮಗೆ ಹೆಮ್ಮೆ ಎಂದರು.
ಮುಖಂಡರಾದ ಹರೀಶ್ ಚಂದ್ರ ಎಂ, ತುಳಸಿ ಕುಮಾರಿ, ರಕ್ಷನ್ ಅಡಕಳ, ಜಗದೀಶ್ ಚೆಂಡ್ಲಾ, ದೂಮಪ್ಪ ಶೆಟ್ಟಿ, ಯತೀರಾಜ್ ಶೆಟ್ಟಿ ಉಪಸ್ಥಿತರಿದ್ದರು. ಭಾಸ್ಕರ್ ಪೊಯ್ಯೆ ಸ್ವಾಗತಿಸಿ, ರವಿರಾಜ್ ವಂದಿಸಿದರು.