HEALTH TIPS

ಕೇರಳ ಹೆದ್ದಾರಿ ಮುಖ್ಯಸ್ಥರನನ್ನು ಭೇಟಿಯಾದ ಬಿಜೆಪಿ ನಿಯೋಗ

        ಮಂಜೇಶ್ವರ: ಮಂಜೇಶ್ವರದ ಹೆದ್ದಾರಿ ಸಮಸ್ಯೆ ಹಾಗೂ ಆಗಬೇಕಾದ ಪರಿಹಾರಗಳು ಒಳಗೊಂಡಂತೆ ಜನತೆಯ ಬೇಡಿಕೆಗಳನ್ನು ಕೇರಳ ಹೆದ್ದಾರಿ ಮುಖ್ಯಸ್ಥರಾದ ಬಿ.ಎಲ್. ಮೀನಾ ಅವರನ್ನು ತಿರುವನಂತಪುರ ಕೇಂದ್ರ ಕಚೇರಿಯಲ್ಲಿ ಬಿಜೆಪಿ ನಿಯೋಗ ಭೇಟಿಯಾಗಿ ವಿವರಿಸಿ ಮನವಿ ನೀಡಿದೆ. 

         ಹೆದ್ದಾರಿ ಅಗಲೀಕರಣದ ಬೆನ್ನಿಗೇ ಹುಟ್ಟಿಕೊಂಡ ವಿವಿಧ ಸಮಸ್ಯೆಗಳನ್ನು ಅಧಿಕೃತರ ಮುಂದಿಡಲಾಯಿತು. ಮಂಜೇಶ್ವರ ರಾಗಂ ಜಂಕ್ಷನ್ ಅಂಡರ್ ಪಾಸ್, ಚೆಕ್ ಪೋಸ್ಟ್ ‘ಯು’ ತಿರುವು ಅಗತ್ಯತೆ, ಉದುಮ ಪೊಲ್ಲಾಕಡ ಅಂಡರ್ ಪಾಸ್, ಅಣಂಗೂರು ಅಂಡರ್ ಪಾಸ್ ಮುಂತಾದ ಅಗತ್ಯತೆಗಳ ಬಗ್ಗೆ ವಿವರಿಸಿ ಬೇಡಿಕೆ ನೀಡಲಾಯಿತು.  

            ಪರಿಹರಿಸುವ ಸಾಧ್ಯತೆಗಳ ಬಗ್ಗೆ ಅಧ್ಯಯನ ಮಾಡಿ ಸ್ಪಂದಿಸುವ ಭರವಸೆ ಯನ್ನು ಅಧಿಕಾರಿಗಳು ಭರವಸೆ ನೀಡಿರುವರು. ಬಿಜೆಪಿ ಜಿಲ್ಲಾ ಪ್ರ ಕಾರ್ಯದರ್ಶಿ ವಿಜಯ್ ಕುಮಾರ್ ರೈ ನೇತೃತ್ವದಲ್ಲಿ ಮಂಡಲಾಧ್ಯಕ್ಷ ಆದರ್ಶ ಬಿ ಎಂ, ಯಾದವ ಬಡಾಜೆ, ಪಿ ರಮೇಶ್, ಉದುಮ ರಾಗೇಶ್ ತಂಡದಲ್ಲಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries