HEALTH TIPS

ಅಭಿಮನ್ಯು ಹತ್ಯೆ ಪ್ರಕರಣದ ಬೆನ್ನಿಗೇ ಪ್ರಧಾನಿಗೆ ಜೀವ ಬೆದರಿಕೆ ಪ್ರಕರಣದ ದಾಖಲೆಗಳೂ ನಾಪತ್ತೆ!

                   ಕೊಚ್ಚಿ: ಅಭಿಮನ್ಯು ಹತ್ಯೆ ಪ್ರಕರಣದ ದಾಖಲೆಗಳು ನಾಪತ್ತೆಯಾಗಿರುವ ಬೆನ್ನಲ್ಲೇ ಎರ್ನಾಕುಳಂ ಸೆಷನ್ಸ್ ನ್ಯಾಯಾಲಯ ಪ್ರಕರಣದ ದಾಖಲೆಗಳೂ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. 

                 ಪ್ರಧಾನಿಗೆ ಜೀವ ಬೆದರಿಕೆ ಹಾಕಿರುವ ಯುಎಪಿಎ ಪ್ರಕರಣದ ದಾಖಲೆಗಳು ನಾಪತ್ತೆಯಾಗಿವೆ. ಪ್ರಕರಣದ ಆರೋಪಿಗಳು ತಮಿಳುನಾಡು ಮೂಲದ ಐವರು. 2016ರಲ್ಲಿ ದಾಖಲಾಗಿದ್ದ ಪ್ರಕರಣದ ದಾಖಲೆಗಳು ನಾಪತ್ತೆಯಾಗಿವೆ. ಪ್ರಕರಣದ ವಿಚಾರಣೆ ಆರಂಭವಾಗುವ ಹಂತದಲ್ಲಿದ್ದಾಗ ದಾಖಲೆಗಳು ನಾಪತ್ತೆಯಾಗಿರುವ ಮಾಹಿತಿ ಬೆಳಕಿಗೆ ಬಂದಿದೆ.

                 ಈ ಹಿಂದೆ ಮಹಾರಾಜ ಕಾಲೇಜಿನ ವಿದ್ಯಾರ್ಥಿ ಹಾಗೂ ಎಸ್‍ಎಫ್‍ಐ ಮುಖಂಡನಾಗಿದ್ದ ಅಭಿಮನ್ಯು ಹತ್ಯೆ ಪ್ರಕರಣದ ದಾಖಲೆಗಳೂ ನಾಪತ್ತೆಯಾಗಿದ್ದವು. ಎರ್ನಾಕುಳಂ ಸೆಂಟ್ರಲ್ ಪೋಲೀಸರು ಎರ್ನಾಕುಳಂ ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದ ದಾಖಲೆಗಳು ನಾಪತ್ತೆಯಾಗಿವೆ.

                ನ್ಯಾಯಾಲಯದಿಂದ ಚಾರ್ಜ್ ಶೀಟ್ ಸೇರಿದಂತೆ ಪ್ರಮುಖ ದಾಖಲೆಗಳು ಕಳೆದು ಹೋಗಿವೆ. ವಿಚಾರಣೆ ಆರಂಭವಾಗುತ್ತಿದ್ದಂತೆ ದಾಖಲೆಗಳು ನಾಪತ್ತೆಯಾಗಿದ್ದವು. ದಾಖಲೆಗಳು ಕಾಣೆಯಾಗಿರುವ ಬಗ್ಗೆ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ಹೈಕೋರ್ಟ್‍ಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಕಳೆದ ಡಿಸೆಂಬರ್‍ನಲ್ಲಿ ಹೈಕೋರ್ಟ್‍ಗೆ ನ್ಯಾಯಾಧೀಶರು ಮಾಹಿತಿ ನೀಡಿದ್ದರು. ದಾಖಲೆಗಳನ್ನು ಪತ್ತೆ ಮಾಡುವಂತೆ ಹೈಕೋರ್ಟ್ ಸೂಚಿಸಿತ್ತು.

                ಜುಲೈ 2, 2018 ರಂದು ಅಭಿಮನ್ಯುವನ್ನು ಹತ್ಯೆಗೈಯ್ಯಲಾಗಿತ್ತು. ಪ್ರಕರಣದಲ್ಲಿ 26 ಆರೋಪಿಗಳು ಮತ್ತು 125 ಸಾಕ್ಷಿಗಳಿದ್ದಾರೆ. ಸಹಲ್ ಹಮ್ಜಾ ಅಭಿಮನ್ಯುವಿಗೆ ಇರಿದಿದ್ದಾನೆ. ಪಾಪ್ಯುಲರ್ ಫ್ರಂಟ್ ಅನ್ನು ನಿಷೇಧಿಸುವ ಕೇಂದ್ರ ಸರ್ಕಾರದ ಅಧಿಸೂಚನೆಯಲ್ಲಿ ಉಲ್ಲೇಖಿಸಲಾದ ಅಪರಾಧಗಳಲ್ಲಿ ಅಭಿಮನ್ಯು ಹತ್ಯೆ ಪ್ರಕರಣವೂ ಸೇರಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries