HEALTH TIPS

ಸುಡುವ ಬಿಸಿಲು: ಸ್ವಿಫ್ಟ್ ಬಸ್ ಗಳ ಕಿಟಕಿ ಪರದೆಗಳನ್ನು ತೆಗೆಯಲು ನಿರ್ಧಾರ

                    ತಿರುವನಂತಪುರಂ: ಬಿರುಬಿಸಿಲಿನ ಮಧ್ಯೆ ಸ್ವಿಫ್ಟ್ ಬಸ್‍ನಲ್ಲಿ ಪ್ರಯಾಣಿಸುವವರಿಗೆ ಸ್ವಲ್ಪ ಸಮಾಧಾನವಾಗಲಿದೆ.

                ಕಿಟಕಿ ಗಾಜುಗಳಿಗೆ ಕರ್ಟನ್ ಹಾಕಿರುವುದನ್ನು ತೆಗೆದಿರಿಸಲು ಕೆಎಸ್ ಆರ್ ಟಿಸಿ ನಿರ್ಧರಿಸಿದೆ. ಹೆಚ್ಚಿನ ಜನರು ತೀವ್ರ ಸೆಕೆಯ ಕಾರಣ ಮುಚ್ಚಿದ ಬಸ್ ನಲ್ಲಿ ಪ್ರಯಾಣಿಸಲು ಸಿದ್ಧರಿಲ್ಲದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಮತ್ತು ಇದು ಸಂಗ್ರಹಣೆಯ ಮೇಲೆ ಪರಿಣಾಮ ಬೀರಿದೆ. ಆದರೆ ಎರಡು ವಾರಗಳಿಗಿಂತ ಹೆಚ್ಚು ಕಾಲ ಕರ್ಟನ್ ಗಳನ್ನು ಕ್ಲೀನ್ ಮಾಡದೇ ಇದ್ದರೆ ಅದೂ ತೊಂದರೆ. ಕಾಲಾಕಾಲಕ್ಕೆ ತೊಳೆಯುತ್ತಾರೆಯೇ ಎಂಬುದೂ ತಿಳಿದುಬಂದಿಲ್ಲ. 

              ಸ್ವಿಫ್ಟ್ ಲಾಭದಾಯಕ ವರ್ಗವಾಗಿರುವುದರಿಂದ, ಹೆಚ್ಚು ಜನರು ಬಳಸುತ್ತಾರೆ.  ನಿಯಮಿತ ಮಧ್ಯಂತರದಲ್ಲಿ ತೊಳೆಯಲು ಸಾಧ್ಯವಿದೆ. ಆದರೆ ಕೆಲವು ಸೂಪರ್ ಫಾಸ್ಟ್ ಬಸ್‍ಗಳಲ್ಲಿ ಶೆಟರ್‍ಗಳ ಬದಲಿಗೆ ಕಿಟಕಿಗಳಿವೆ. ಇವುಗಳಿಗೆ ಹಾಕಿರುವ ಗಾಜು ಗಾಳಿ ಸರಿಯಾಗಿ ಬರಲು ತೊಡಕಾಗಿದ್ದು, ಸ್ವಲ್ಪವೂ ಅಲುಗಾಡಿಸಲು ಸಾಧ್ಯವಾಗದ ರೀತಿಯಲ್ಲಿದೆ.  ಈ ವಿಚಾರವಾಗಿ  ಪ್ರಯಾಣಿಕರು ಜಗಳವಾಡುವುದು ಸಾಮಾನ್ಯವಾಗಿದೆ.

              ಏನೇ ಆಗಲಿ, ತೆರೆ ಎಳೆಯುವ ಹೊತ್ತಿಗೆ ಮಳೆಗಾಲ ಬರುತ್ತಿದೆ. ಆಗ ಮರಳಿ ಕರ್ಟನ್ ಹಾಕುವರೇ, ಅಥವಾ ಅದು ಶಾಶ್ವತ ಹಿನ್ನೆಲೆಗೆ ಸರಿಯುವುದೇ ಎಂದು ಕಾದು ನೋಡಬೇಕಿದೆ.


   


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries