ಉಪ್ಪಳ: ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಅಶ್ವಿನಿ ಎಂ.ಎಲ್ ಅವರ ಪ್ರಚಾರಾರ್ಥ ಉಪ್ಪಳ ಭಗವತೀ ಗೇಟ್ ಬಳಿ ಅಳವಡಿಸಲಾಗಿದ್ದ ಪ್ಲೆಕ್ಸ್ ಬೋರ್ಡನ್ನು ಕಿಡಿಗೇಡಿಗಳು ನಾಶಗೊಳಿಸಿದ್ದಾರೆ. ಎನ್ಡಿಎ ಮಂಜೇಶ್ವರ ಮಂಡಲ ಚುನಾವಣಾ ಕಚೇರಿಯನ್ನು ಉಪ್ಪಳ ಭಗವತೀ ಗೇಟ್ ಸನಿಹ ಮಾ. 8ರಂದು ಉದ್ಘಾಟನೆಗೆ ಸಿದ್ಧತೆ ನಡೆಸಲಾಗಿದ್ದು, ಈ ಹಿನ್ನೆಲೆಯಲ್ಲಿ ಅಶ್ವಿನಿ ಎಂ.ಎಲ್ ಅವರ ಬೃಹತ್ ಫ್ಲೆಕ್ಸ್ ಬೋರ್ಡ್ ಗುರುವಾರ ಅಳವಡಿಸಲಾಗಿತ್ತು. ತಡರಾತ್ರಿ ಕಿಡಿಗೇಡಿಗಳು ಫ್ಲೆಕ್ಸ್ ಬೋರ್ಡನ್ನು ಹರಿದು ಹಾನಿಗೊಳಿಸಿದ್ದಾರೆ. ಕಿಡಿಗೇಡಿಗಳ ಕೃತ್ಯದ ವಿರುದ್ಧ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಅಧ್ಯಕ್ಷ ಆದರ್ಶ್ ಬಿ.ಎಂ ನೀಡಿದ ದೂರಿನನ್ವಯ ಪೊಒಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.