ಬದಿಯಡ್ಕ: ಮಾನ್ಯ ಸಮೀಪದ ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಜೀರ್ಣೋದ್ಧಾರ ಕಾರ್ಯದ ಭಾಗವಾಗಿ ಮಹಾಶಿವರಾತ್ರಿಯ ಶುಭದಿನದಂದು ಬೆಳಗ್ಗೆ ಸೂರ್ಯೋದಯದಿಂದ ಶನಿವಾರ ಬೆಳಗ್ಗೆ ಸೂರ್ಯೋದಯದ ತನಕ ಏಕಾಹ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಬೇಂಗ್ರೋಡಿ ಕೃಷ್ಣಪ್ರಸಾದ್ ಭಟ್ ದೀಪ ಪ್ರಜ್ವಲನೆಗೈದು ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿವಿಧ ಭಜನಾ ತಂಡಗಳ ಸದಸ್ಯರು, ಜೀರ್ಣೋದ್ಧಾರ ಸಮಿತಿ, ಆಡಳಿತ ಸಮಿತಿ, ಸೇವಾ ಸಮಿತಿ, ಯುವಕ ವೃಂದ ಹಾಗೂ ಮಹಿಳಾ ವೃಂದದ ಪದಾಧಿಕಾರಿಗಳು ಭಾಗವಹಿಸಿದ್ದರು.