HEALTH TIPS

ಕರ್ತವ್ಯದ ವೇಳೆ ಕುಡಿತ: ಕೆಎಸ್ ಆರ್ ಟಿಸಿಯಿಂದ ಮತ್ತೆ ಲಾಠಿ ಪ್ರಹಾರ: 137 ನೌಕರರ ಬಂಧನ; 97 ಮಂದಿ ಅಮಾನತು

                                                 

              ತಿರುವನಂತಪುರಂ: ಕೆಎಸ್‍ಆರ್‍ಟಿಸಿಯಲ್ಲಿ ಕುಡಿದು ಕೆಲಸಕ್ಕೆ ಆಗಮಿಸುವುದು  ಸಾಮಾನ್ಯ. ಈ ಬಗ್ಗೆ ನಡೆಸಿದ ಪರೀಕ್ಷೆಯಲ್ಲಿ 97 ಉದ್ಯೋಗಿಗಳು ಸಿಕ್ಕಿಬಿದ್ದಿದ್ದಾರೆ.

                ಕರ್ತವ್ಯದ ವೇಳೆ ಮದ್ಯ ಸೇವಿಸಿ ಆಗಮಿಸಿದ ಸ್ಟೇಶನ್ ಅಧಿಕಾರಿ, ವಾಹನ ಮೇಲ್ವಿಚಾರಕ ಸೇರಿದಂತೆ 137 ಮಂದಿಯನ್ನು ಬಂಧಿಸಲಾಗಿದೆ.

                 97 ಜನರನ್ನು ಅಮಾನತುಗೊಳಿಸಲಾಗಿದೆ. ಸ್ವಿಫ್ಟ್‍ನ ಹಂಗಾಮಿ ನೌಕರರು ಮತ್ತು ಕೆಎಸ್‍ಆರ್‍ಟಿಸಿಯ ಬದಲಿ ನೌಕರರು ಸೇರಿದಂತೆ 40 ಜನರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಕುಡಿದು ಕರ್ತವ್ಯಕ್ಕೆ ಆಗಮಿಸಿದ್ದಕ್ಕೆ ಈ ಕ್ರಮವಾಗಿದೆ. ತನಿಖೆ ಮುಂದುವರಿಯಲಿದೆ ಎಂದು ವರದಿಯಾಗಿದೆ.

                 ಕೆಎಸ್‍ಆರ್‍ಟಿಸಿ ವಿಜಿಲೆನ್ಸ್ ವಿಭಾಗವು ಕೆಎಸ್‍ಆರ್‍ಟಿಸಿ ಮುಖ್ಯ ಕಚೇರಿ ಸೇರಿದಂತೆ ಎಲ್ಲಾ ಘಟಕಗಳು ಮತ್ತು ಪ್ರಾದೇಶಿಕ ಕಾರ್ಯಾಗಾರಗಳಲ್ಲಿ ತಪಾಸಣೆ ನಡೆಸಿತು. ಸಾರಿಗೆ ಸಚಿವ ಕೆ.ಬಿ.ಗಣೇಶ್ ಕುಮಾರ್ ಅವರ ಸೂಚನೆಯಂತೆ ಪರಿಶೀಲನೆ ನಡೆಸಲಾಗುತ್ತಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries